ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕೋದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಸರತಿ ಸಾಲಿನಲ್ಲಿ ನಿಂತು ಅಪ್ಲಿಕೇಶನ್ ಹಾಕುತ್ತಿದ್ದಾರೆ. ಆದ್ರೆ, ಇನ್ನು ಮುಂದೆ ಇಷ್ಟು ರಿಸ್ಕ್ ಬೇಡ. ಗೃಹಲಕ್ಷ್ಮಿ ಯೋಜನೆಗೆ ವಾಟ್ಸಾಪ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ರಶ್ ಹೆಚ್ಚಿದೆ. ಈ ದಟ್ಟಣೆ ಕಡಿಮೆ ಮಾಡಲು ಇದೇ ಮೊದಲ ಬಾರಿಗೆ ಹೊಸ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ. ಇ-ಆಡಳಿತಕ್ಕಾಗಿ ಕೇಂದ್ರವು ಅಭಿವೃದ್ಧಿಪಡಿಸಿದ ವಾಟ್ಸಾಪ್ ಚಾಟ್ಬಾಟ್ ಸಹಾಯದಿಂದ ಜನರು ಅರ್ಜಿ ಸಲ್ಲಿಸಬಹುದಾಗಿದೆ.
ಸಾಮಾನ್ಯವಾಗಿ ಕಂಪನಿಗಳು ಗ್ರಾಹಕರ ಜೊತೆ ಸಂವಹನ ಮಾಡಲು ಚಾಟ್ಬಾಟ್ ಬಳಸ್ತಾರೆ. ಇದನ್ನೇ ಈಗ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಬಳಸಬಹುದಾಗಿದೆ. ವಾಟ್ಸಾಪ್ ನಂಬರ್ 8147500500ಗೆ ನಿಮ್ಮ ವಿವರ ಕಳಿಸಬೇಕು. ಚಾಟ್ಬಾಟ್ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇ-ಆಡಳಿತಕ್ಕಾಗಿ ಅಭಿವೃದ್ಧಿಪಡಿಸಿದ ಚಾಟ್ಬಾಟ್ ಅರ್ಜಿ ಸಲ್ಲಿಸುವವರ ಜೊತೆ ಸಂವಹನ ನಡೆಸುತ್ತದೆ. ಎಲ್ಲಾ ದಾಖಲೆ ಸಿದ್ಧಪಡಿಸಿ ಇಟ್ಟುಕೊಂಡಿದ್ದರೆ, ಮೂರೇ ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದು.
ಚಾಟ್ಬಾಟ್ ಪಡೆದ ಎಲ್ಲಾ ಮಾಹಿತಿಯನ್ನ ಅಥವಾ ಅರ್ಜಿಯನ್ನ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕಚೇರಿಗಳಿಗೆ ವರ್ಗಾಯಿಸುತ್ತದೆ. ಅಲ್ಲಿ ದಾಖಲೆಗಳ ಪರಿಶೀಲಿಸಿದ ನಂತರ ಅರ್ಜಿ ಸ್ವೀಕಾರ ಮಾಡಲಾಗುತ್ತೆ. ಒಟ್ನಲ್ಲಿ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ಪ್ರತಿಯೊಬ್ಬರ ಮನೆ ಬಾಗಿಲಿಗೂ ತಲುಪಿಸುವ ಕೆಲಸ ಮಾಡ್ತಾಯಿದೆ. ನಾರಿ ಮಣಿಯರಿಗೆ ಶಕ್ತಿ ನಂತರ ಲಕ್ಷ್ಮಿ ಕೈ ಹಿಡಿಯಲು ವಾಟ್ಸಾಪ್ ಮೊರೆ ಹೋಗಲು ಈಗ ಅವಕಾಶ ಇದೆ.
ಈಗ ನಿಮಗೆ ವಾಟ್ಸಾಪ್ನಲ್ಲಿ ದಾಖಲೆ ಕೊಟ್ಟರೆ ಹೇಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆಗುತ್ತೆ ಎಂಬ ಪ್ರಶ್ನೆ ಅಥವಾ ಸಂದೇಹ ಮೂಡಿರಬಹುದು. ಅದಕ್ಕೂ ನಾವು ಉತ್ತರವನ್ನು ನೀಡುತ್ತೇವೆ. ಈಗಾಗಲೇ ಜಗತ್ತಿನಲ್ಲಿ ಎಐ ತಂತ್ರಜ್ಞಾನ (ಕೃತಕ ಬುದ್ಧಿಮತ್ತೆ) ಮೂಲಕ ಈ ವ್ಯವಸ್ಥೆ ಕೆಲಸ ಮಾಡುತ್ತಿದೆ. ನೀವು ವಾಟ್ಸಾಪ್ ಮೂಲಕ ನೀಡುವ ಮಾಹಿತಿ ಎಐ ತಂತ್ರಜ್ಞಾನದ ಮೂಲಕ ಚಾಟ್ಬಾಟ್ ಗೆ ಮಾಹಿತಿ ರವಾನೆ ಆಗುತ್ತೆ. ಅಲ್ಲಿಂದ ಈ ಮಾಹಿತಿ ಇ-ಗವರ್ನೆನ್ಸ್ ಸರ್ವೀಸಸ್ ಇಲಾಖೆಗೆ ಸಿಗುತ್ತದೆ. ಈ ಮೂಲಕ ನೀವು ಕೂತಲ್ಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಮಾಹಿತಿ
ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಕರೆಯಲ್ಪಡುವ ಉಚಿತ ವಸತಿ ಯೋಜನೆಯಡಿ ನೀವು ಮನ... ಓದನ್ನು ಮುಂದುವರಿಸಿ
ಗರ್ಭಿಣಿ ಮಹಿಳೆಯರಿಗೆ ಗುಡ್ ನ್ಯೂಸ್ .... ಕೇಂದ್ರ ಸರ್ಕಾರದಿಂದ ಈ ಮಹಿಳೆಯರಿಗೆ ಸಿಗುತ್ತೆ 11,000 ರೂ, ಹಣ..! ಈಗ್ಲೇ ಅಪ್ಲೈ ಮಾಡಿ.
ಬೆಂಗಳೂರು: ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.... ಓದನ್ನು ಮುಂದುವರಿಸಿ
ಮಹಿಳೆಯರಿಗೆ ಖುಷ್.... ಖಾತೆಗೆ ಬಂತು 11 ನೇ ಕಂತಿನ ಗೃಹಲಕ್ಷ್ಮಿ ಹಣ.. ಅಕೌಂಟ್ ಚೆಕ್ ಮಾಡಿದ್ರಾ!?
ಬೆಂಗಳೂರು: ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಖಾತೆಗೆ 11... ಓದನ್ನು ಮುಂದುವರಿಸಿ
ರೈತ ಮಹಿಳೆಯರಿಗೆ ಸಹಾಯಕವಾಗಲಿದೆ ನಮೋ ಡ್ರೋನ್ ದೀದಿ ಯೋಜನೆ !
ಕೇಂದ್ರ ಸರಕಾರ ಮಹಿಳೆಯರಿಗಾಗಿ ಹಲವು ಸರಕಾರಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಮಹಿಳ... ಓದನ್ನು ಮುಂದುವರಿಸಿ
ಮನೆ ಇಲ್ಲದವರಿಗೆ ಗುಡ್ ನ್ಯೂಸ್..! ಬಡವರಿಗೆ ಮನೆ ಭಾಗ್ಯ..! ಇಲ್ಲಿದೆ ಸಂಪೂರ್ಣ ಮಾಹಿತಿ..!
ಬೆಂಗಳೂರು:- ಸೂರು ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ವಸತಿ... ಓದನ್ನು ಮುಂದುವರಿಸಿ
ಬಿತ್ತನೆ ಬೀಜ ಖರೀದಿಸಲು ಸರ್ಕಾರದಿಂದ ಸಿಗಲಿದೆ ಸಬ್ಸಿಡಿ !
ಬಿತ್ತನೆ ಬೀಜ ಖರೀದಿಸಲು ರೈತರಿಗೆ ಸರ್ಕಾರವು 50 ಪ್ರತಿಶತ ಸಬ್ಸಿಡಿಯನ್ನು ನೀಡುತ... ಓದನ್ನು ಮುಂದುವರಿಸಿ
ಮಹಿಳೆಯರಿಗೆ ಬಿಗ್ ಶಾಕಿಂಗ್ ನ್ಯೂಸ್..... ಇನ್ನು ಮುಂದೆ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ..!
ಬೆಂಗಳೂರು: ಮಹಿಳೆಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಗ್... ಓದನ್ನು ಮುಂದುವರಿಸಿ
ಸೂರು ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್.. ಸರ್ಕಾರದಿಂದ ಬಂತು ಉಚಿತ ಮನೆ.. ಇಂತವರು ಅರ್ಜಿ ಸಲ್ಲಿಸಿ..!
ಬೆಂಗಳೂರು: ಸೂರು ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ... ಓದನ್ನು ಮುಂದುವರಿಸಿ
ಸರ್ಕಾರದಿಂದ ಉಚಿತ ಗ್ಯಾಸ್ ಪಡೆಯಬೇಕೆ!?.. ಹಾಗಿದ್ರೆ ಈ ರೀತಿ ಅರ್ಜಿ ಸಲ್ಲಿಸಿ..!
ಬೆಂಗಳೂರು: ಸರ್ಕಾರದಿಂದ ಯಾರೆಲ್ಲಾ ಉಚಿತ ಗ್ಯಾಸ್ ಗಳನ್ನು ಪಡೆಯಲು... ಓದನ್ನು ಮುಂದುವರಿಸಿ
ಬಿಗ್ ಶಾಕಿಂಗ್ ನ್ಯೂಸ್.. ಇನ್ನೂ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ!
ಬೆಂಗಳೂರು: ಬಿಗ್ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದ್ದು, ಇನ್ನ... ಓದನ್ನು ಮುಂದುವರಿಸಿ