ಕೃಷಿಕ ಯುವಕರ ಪರ ಕುಣಿಗಲ್ ಶಾಸಕ ಧ್ವನಿ – ಸಿಎಂ ಗಮನಕ್ಕೆ ವಿಶೇಷ ಮನವಿ
ತುಮಕೂರು: ಗ್ರಾಮೀಣ ಭಾಗದ ಯುವಕರ ವಿವಾಹ ಸಮಸ್ಯೆಯನ್ನು ಪ್ರಸ್ತಾಪಿಸಿ ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಭಿನ್ನ ಮನವಿ ಪತ್ರ ಬರೆದು ಜನಮನ ಸೆಳೆದಿದ್ದಾರೆ. ಕುಣಿಗಲ್ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯನ್ನು ಅವಲಂಬಿಸಿ ಬದುಕುತ್ತಿರುವ ಅನೇಕ ಯುವಕರು ಮದುವೆಯಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. “ನನ್ನ ಮತಕ್ಷೇತ್ರವು ಸಂಪೂರ್ಣ ಗ್ರಾಮೀಣ ಪ್ರದೇಶವಾಗಿದ್ದು, ಯುವಕರನ್ನು ಕೃಷಿಯತ್ತ ಪ್ರೋತ್ಸಾಹಿಸಲಾಗಿದೆ. ಆದರೆ ಮದುವೆಗೆ ಮುಂದೆ ಬರುವ ಹೆಣ್ಣು ಮಕ್ಕಳು ಸಿಗದ ಕಾರಣ, ಕೆಲವರು ಮೂವತ್ತಕ್ಕೂ ಮೀರಿದರೂ ಅವಿವಾಹಿತರಾಗಿದ್ದಾರೆ,” ಎಂದು ಡಾ. ರಂಗನಾಥ್ ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಹಳ್ಳಿಗಳಲ್ಲಿ ವಾಸವಿದ್ದು ಕೃಷಿಯಲ್ಲಿ ನಿರತರಾಗಿರುವ ಯುವಕರಿಗೆ ಮದುವೆಯಾಗಲು ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ ಹಾಗೂ ವಿಶೇಷ ಸ್ಥಾನಮಾನ ಘೋಷಿಸಲು ಮುಂದಿನ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮೀಣ ಯುವಕರ ವಿವಾಹ ಸಮಸ್ಯೆಯ ಕುರಿತು ಸರ್ಕಾರದ ಗಮನ ಸೆಳೆಯುವಂತೆ ಮಾಡುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಗುಡಿಬಂಡಾ
ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ; ಪ್ರತಿ ಕ್ವಿಂಟಲ್ಗೆ ₹4,876 ಬೆಂಬಲ ಬೆಲೆ
ಗುಡಿಬಂಡೆ: ತಾಲೂಕಿನ ರೈತರ ಬಹುದಿನಗಳ ನಿರೀಕ್ಷೆ ಈಡೇರಿದ್ದು, ಬಾಲ... ಓದನ್ನು ಮುಂದುವರಿಸಿ
ಕೈತುಂಬಾ ಸಂಬಳದ ಐಟಿ ಉದ್ಯೋಗ ಬಿಟ್ಟು ಮೀನು ಸಾಕಣೆ ಉದ್ಯಮದಲ್ಲಿ ಯಶಸ್ವಿ ಎಂಜಿನಿಯರ್
ಮಧ್ಯಪ್ರದೇಶ: ಜಬಲ್ಪುರದ ಭವಾನಿ ಝಾ ತಮ್ಮ ಶ್ರದ್ಧೆ, ನಿಷ್ಠೆ ಮತ್ತ... ಓದನ್ನು ಮುಂದುವರಿಸಿ
ರೈತರ ಮಗನನ್ನು ಮದುವೆಯಾದ ಮಹಿಳೆಗೆ ಸರ್ಕಾರಿ ಉದ್ಯೋಗದಲ್ಲಿ 20% ಮೀಸಲು: CMಗೆ ರೈತರ ಮನವಿ
ಬೆಂಗಳೂರು: ರೈತರ ಮಗನನ್ನು ವಿವಾಹವಾಗುವ ಮಹಿಳೆಯರಿಗೆ ಸರ್ಕಾರಿ ಉದ... ಓದನ್ನು ಮುಂದುವರಿಸಿ
ಬೇಸಿಗೆ ಹಾಲು ಹೆಚ್ಚಿಸಲು ಹಸುಗೆ ಈ ಮೇವಿನ ಮಿಶ್ರಣ ಸಾಕು!
ಬೇಸಿಗೆ ಹಾಲು ಉತ್ಪಾದನೆ: ನೈಸರ್ಗಿಕ ವಿಧಾನಗಳೇ ಉತ್ತಮ
ಬೇಸ... ಓದನ್ನು ಮುಂದುವರಿಸಿ
ಅನ್ನದಾತರಿಗೆ ಶಾಕ್: 30 ಲಕ್ಷ ರೈತರಿಗೆ PM ಕಿಸಾನ್ ₹2,000 ಸಹಾಯಧನ ಸ್ಥಗಿತ! ಕಾರಣವೇನು?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PM-Kisan) ನಿಧಿ ಯೋಜನೆಯ 22ನೇ ಕಂತಿಗಾಗಿ... ಓದನ್ನು ಮುಂದುವರಿಸಿ
ಅತ್ಯಂತ ದುಬಾರಿ ಅಣಬೆ ಯರ್ಸಗುಂಬಾ: ಕೊಪ್ಪಳ ಮೇಳದಲ್ಲಿ ಜನರ ಕಣ್ಣಿಗೆ ಸದ್ದು
ಕೊಪ್ಪಳ: ಜಗತ್ತಿನಲ್ಲೇ ಅತ್ಯಂತ ದುಬಾರಿ ಅಣಬೆ ಎಂದು ಕರೆಯಲಾಗುವ <... ಓದನ್ನು ಮುಂದುವರಿಸಿ
ಮೃತರ ಕುಟುಂಬಗಳಿಗೆ ಗುಡ್ ನ್ಯೂಸ್: ಮಾರ್ಚ್ ಅಂತ್ಯದೊಳಗೆ “ಪೌತಿ ಖಾತೆ” ಮುಕ್ತಾಯಕ್ಕೆ ಸೂಚನೆ
ಧಾರವಾಡ: ಧಾರವಾಡದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸ... ಓದನ್ನು ಮುಂದುವರಿಸಿ
ಈ ಬೆಳೆಯಿಂದ ಕೋಟ್ಯಾಧಿಪತಿಗಳಾಗೋದು ಫಿಕ್ಸ್!”“ರೈತರನ್ನು ಶ್ರೀಮಂತರನ್ನಾಗಿಸಲು ಕೇಂದ್ರದ ಮಾಸ್ಟರ್ ಪ್ಲ್ಯಾನ್
ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ.... ಓದನ್ನು ಮುಂದುವರಿಸಿ
ಮಣ್ಣಲ್ಲೇ ಚಿನ್ನ.. ವೈಜ್ಞಾನಿಕ ಕಿನ್ನೋ ಕೃಷಿಯಿಂದ ಲಕ್ಷಾಂತರ ರೂ. ಆದಾಯ ಪಡೆದ ರೈತ – ಅಜಯ್ ವಿಷ್ಣೋಯ್
ಪಂಜಾಬ್: ಕೃಷಿಯಲ್ಲಿ ನವೀನ ತಂತ್ರಜ್ಞಾನ ಅಳವಡಿಸಿಕೊಂಡು ಯಶಸ್ಸು ಸ... ಓದನ್ನು ಮುಂದುವರಿಸಿ
ಸಮಗ್ರ ಕೃಷಿಯಿಂದ ಯಶಸ್ಸು – ಯುವ ರೈತ ಅಮೇಶ್ ವಿಶಾಲ್ ಪ್ಲಮ್ ಹಣ್ಣುಗಳ ಹೊಟ್ಟೆಗೊಳ್ಳುವ ಯೋಜನೆ
ಬಿಹಾರ: ಬಿಹಾರದ ನಳಂದ ಜಿಲ್ಲೆ, ಸರ್ಮೇರಾ ಬ್ಲಾಕ್ನ ತಾಲ್... ಓದನ್ನು ಮುಂದುವರಿಸಿ