ಬೈಕ್ ಮಾರಿದರೂ ಜವಾಬ್ದಾರಿ ನಿಮ್ಮದೇ! ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು: ವಾಹನವನ್ನು ಮಾರಾಟ ಮಾಡಿದ ಬಳಿಕವೂ ನೋಂದಣಿ ಪ್ರಮಾಣಪತ್ರ (RC)ದಲ್ಲಿ ಮಾಲೀಕರ ಹೆಸರು ಅಧಿಕೃತವಾಗಿ ಬದಲಾಗುವವರೆಗೂ ಆ ವಾಹನದ ಸಂಪೂರ್ಣ ಜವಾಬ್ದಾರಿ ಮೂಲ ಮಾಲೀಕರ ಮೇಲೇ ಇರುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ವಾಹನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದS. G. ಪಂಡಿತ್ ಮತ್ತು K. V. ಅರವಿಂದ್ ಅವರಿದ್ದ ಪೀಠ ಈ ಮಹತ್ವದ ಆದೇಶ ನೀಡಿದೆ.
ಅಪಘಾತಕ್ಕೆ ಕಾರಣವಾದ ಬೈಕ್ನ RC ಇನ್ನೂ ಸುನೀಲ್ ಕುಮಾರ್ ಹೆಸರಲ್ಲೇ ಇರುವುದರಿಂದ, ಪರಿಹಾರ ಪಾವತಿಯ ಸಂಪೂರ್ಣ ಜವಾಬ್ದಾರಿ ಅವರದ್ದೇ ಎಂದು ನ್ಯಾಯಾಲಯ ತಿಳಿಸಿದೆ. ವಾಹನವನ್ನು ಮಾರಾಟ ಮಾಡಿರುವುದು ಮಾತ್ರ ಸಾಕಾಗುವುದಿಲ್ಲ; RC ಅಧಿಕೃತವಾಗಿ ವರ್ಗಾವಣೆ ಆಗಿರಬೇಕು ಎಂದು ಪೀಠ ಒತ್ತಿಹೇಳಿದೆ. ಇದೇ ವೇಳೆ, ನ್ಯಾಯಾಲಯ ಪರಿಹಾರ ಮೊತ್ತದಲ್ಲಿಯೂ ತಿದ್ದುಪಡಿ ಮಾಡಿ, ಮೊದಲು ನಿಗದಿಯಾಗಿದ್ದ 33.07 ಲಕ್ಷ ರೂ. ಪರಿಹಾರವನ್ನು ಹೆಚ್ಚಿಸಿ ಒಟ್ಟು 47.15 ಲಕ್ಷ ರೂ. ಪಾವತಿಸಲು ಆದೇಶಿಸಿದೆ. ಈ ಹೆಚ್ಚುವರಿ ಮೊತ್ತವನ್ನು ಸಹ ಮೂಲ ಮಾಲೀಕರೇ ಪಾವತಿಸಬೇಕೆಂದು ತಿಳಿಸಿದೆ.
📌 ಪ್ರಕರಣದ ಹಿನ್ನೆಲೆ
ಮಾರತಹಳ್ಳಿ ನಿವಾಸಿ ಸುನೀಲ್ ಕುಮಾರ್ ತಮ್ಮ ಬೈಕ್ ಅನ್ನು ಶಬ್ರೀಜ್ಗೆ ಮಾರಾಟ ಮಾಡಿದ್ದರು. ಆದರೆ RC ವರ್ಗಾವಣೆ ಪೂರ್ಣಗೊಳ್ಳುವ ಮೊದಲು, 2020ರ ಜೂನ್ 18ರಂದು ನಡೆದ ಅಪಘಾತದಲ್ಲಿ ಹನುಮಂತ ಎಂಬವರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮೊದಲು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ ಇಬ್ಬರೂ ಸೇರಿ ಪರಿಹಾರ ಪಾವತಿಸಬೇಕು ಎಂದು ಹೇಳಿತ್ತು. ಆದರೆ ಹೈಕೋರ್ಟ್, RC ಇನ್ನೂ ಮೂಲ ಮಾಲೀಕರ ಹೆಸರಲ್ಲಿದ್ದ ಕಾರಣ ಸಂಪೂರ್ಣ ಜವಾಬ್ದಾರಿ ಅವರ ಮೇಲೇ ಇರುತ್ತದೆ ಎಂದು ಅಂತಿಮ ತೀರ್ಪು ನೀಡಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಒಂದೇ ದಿನದಲ್ಲಿ ಚಿನ್ನ ಬೆಲೆ ಏರಿಕೆ – ಖರೀದಿದಾರರಿಗೆ ತಲೆನೋವು
ಬೆಂಗಳೂರು: ಸತತ ಮೂರು ವಾರಗಳ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಯಲ... ಓದನ್ನು ಮುಂದುವರಿಸಿ
ಚಿನ್ನದ ದರ ಇಳಿಕೆ – ಗ್ರಾಹಕರಿಗೆ ಸ್ವಲ್ಪ ನಿರಾಳತೆ!
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ... ಓದನ್ನು ಮುಂದುವರಿಸಿ
ಎಲ್ಪಿಜಿ ಬಿಕ್ಕಟ್ಟಿಗೆ ಪರಿಹಾರ – ಕೇಂದ್ರದಿಂದ ಮಿನಿ ಗ್ಯಾಸ್ ಸಿಲಿಂಡರ್ ಯೋಜನೆ!
ನವದೆಹಲಿ: ಎಲ್ಪಿಜಿ ಬಿಕ್ಕಟ್ಟಿನ ನಡುವೆಯೇ ಸಾರ್ವಜನಿಕರಿಗೆ ನೆರವ... ಓದನ್ನು ಮುಂದುವರಿಸಿ
ಟೋಲ್ ಪಾವತಿಯಲ್ಲಿ ದೊಡ್ಡ ಬದಲಾವಣೆ – ಏಪ್ರಿಲ್ 10ರಿಂದ ನಗದು ಸಂಪೂರ್ಣ ಬ್ಯಾನ್!
ನವದೆಹಲಿ: ದೇಶದ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಮಹತ್ವದ... ಓದನ್ನು ಮುಂದುವರಿಸಿ
ಗೋಲ್ಡ್-ಸಿಲ್ವರ್ ರೇಟ್ ಶಾಂತ: ಇಂದಿನ ದರಗಳ ವಿವರ
ಭಾರತ: ಕಳೆದ ಕೆಲ ದಿನಗಳಿಂದ ಏರಿಳಿತ ಕಂಡಿದ್ದ ಚಿನ್ನ ಮತ್ತು ಬೆಳ್... ಓದನ್ನು ಮುಂದುವರಿಸಿ
ಹಳೆಯ ವಾಹನಗಳಿಗೆ HSRP ಕಡ್ಡಾಯ: ರಾಜ್ಯ ಸಾರಿಗೆ ಇಲಾಖೆಯ ಸ್ಪಷ್ಟನೆ
ಬೆಂಗಳೂರು: 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಾಯಿತವಾಗಿರುವ ಎಲ್... ಓದನ್ನು ಮುಂದುವರಿಸಿ
ಮತ್ತೆ ಏರಿಕೆಯ ಹಾದಿಯಲ್ಲಿ ಚಿನ್ನದ ಬೆಲೆ – ಇಂದು ₹200ರವರೆಗೆ ಜಿಗಿತ!
ಬೆಂಗಳೂರು: ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ನಿನ್ನ... ಓದನ್ನು ಮುಂದುವರಿಸಿ
ಐಪಿಎಲ್ ಪಂದ್ಯಕ್ಕೆ ಮೆಟ್ರೋ ಸೌಲಭ್ಯ ವಿಸ್ತರಣೆ: ಮಧ್ಯರಾತ್ರಿ 2ರವರೆಗೆ ಸೇವೆ!
ಬೆಂಗಳೂರು: ಐಪಿಎಲ್–2026 ಪಂದ್ಯಗಳ ಹಿನ್ನೆಲೆ, ಬಿಎಂಆರ್ಸಿಎಲ್ ನ... ಓದನ್ನು ಮುಂದುವರಿಸಿ
ಮತ್ತೆ ಗ್ಯಾಸ್ ದರ ಏರಿಕೆ : ಹೋಟೆಲ್, ರೆಸ್ಟೋರೆಂಟ್ಗಳಿಗೆ ಮತ್ತೊಂದು ಹೊಡೆತ
ದೆಹಲಿ: ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಕೊರತೆಯ ನಡುವೆ ಬಳಕೆದಾರ... ಓದನ್ನು ಮುಂದುವರಿಸಿ
ವಾಹನ ಸವಾರರಿಗೆ ರಿಲೀಫ್ : ಹೊರರಾಜ್ಯದಲ್ಲಿ ಇನ್ಮುಂದೆ ದಂಡ ಇಲ್ಲ!
ಬೆಂಗಳೂರು: ಕರ್ನಾಟಕದ ವಾಹನ ಮಾಲೀಕರಿಗೆ ದೊಡ್ಡ ಸಮಸ್ಯೆಯಾಗಿದ್ದ ಪ... ಓದನ್ನು ಮುಂದುವರಿಸಿ