ಸಾನ್ಯಾ ಮಲ್ಹೋತ್ರ ಲವ್ ಟು ಬ್ರೇಕಪ್? ಸೋಶಿಯಲ್ ಮೀಡಿಯಾ ಸುಳಿವು
ಮುಂಬೈ: ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರ ತಮ್ಮ ವೈಯಕ್ತಿಕ ಬದುಕಿನ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಸಿತಾರ್ ವಾದಕ ರಿಷಬ್ ರಿಖಿರಾಮ್ ಶರ್ಮಾ ಜೊತೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಡೇಟಿಂಗ್ ಮಾಡುತ್ತಿದ್ದರೆಂಬ ಮಾಹಿತಿ ಇದ್ದು, ಇದೀಗ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಪರಸ್ಪರ ಅನ್ಫಾಲೋ ಮಾಡಿಕೊಂಡಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ. ಸಾನ್ಯಾ ಮಲ್ಹೋತ್ರ ‘ದಂಗಲ್’ ಸಿನಿಮಾದ ಮೂಲಕ ಖ್ಯಾತಿ ಪಡೆದಿದ್ದರು. ಮೊದಲ ಸಿನಿಮಾದಲ್ಲೇ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರೂ, ಇತ್ತೀಚಿನ ದಿನಗಳಲ್ಲಿ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ.
ಸಾನ್ಯಾ ಮತ್ತು ರಿಷಬ್ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. 2024ರ ಡಿಸೆಂಬರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡು, 2025ರ ಆರಂಭದಲ್ಲಿ ಅವರ ಫೋಟೋಗಳು ವೈರಲ್ ಆಗಿದ್ದವು. ನಂತರ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ, ಪ್ರತ್ಯೇಕವಾಗಿ ತೆರಳುವ ಮೂಲಕ ವದಂತಿಗಳಿಗೆ ಅವಕಾಶ ನೀಡದಂತೆ ನೋಡಿಕೊಂಡಿದ್ದರು.
ಇವರ ಬ್ರೇಕಪ್ಗೆ ಕಾರಣ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಚಿತ್ರರಂಗದ ವಿಚಾರದಲ್ಲಿ, ಸಾನ್ಯಾ ‘ಸನ್ಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾದಲ್ಲಿ ನಟಿಸಿದ್ದು, ‘ಟೋಸ್ಟರ್’ ಚಿತ್ರದಲ್ಲಿ ರಾಜ್ಕುಮಾರ್ ರಾವ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಏಪ್ರಿಲ್ 15ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಇನ್ನೊಂದೆಡೆ, ರಿಷಬ್ ರಿಖಿರಾಮ್ ಶರ್ಮಾ ತಮ್ಮ ಸಂಗೀತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಪುನೀತ್ ಮೇಲಿನ ಪ್ರೀತಿ ಪ್ರಶ್ನೆ? ಅನುಶ್ರೀ ಗಿಲ್ಲಿ ಸ್ಟೈಲ್ ರಿಪ್ಲೈ
ಬೆಂಗಳೂರು: ಆ್ಯಂಕರ್ ಅನುಶ್ರೀ ಅವರು ಪುನೀತ್ ರಾಜ್ಕುಮಾರ್ ಅವರ ಅತ... ಓದನ್ನು ಮುಂದುವರಿಸಿ
ಸೂಪರ್ಸ್ಟಾರ್ ಮೌನಕ್ಕೆ ಕಾರಣವೇನು? ‘ಜನ ನಾಯಗನ್’ ಪ್ರಶ್ನೆಗೆ ಉತ್ತರ ಇಲ್ಲ
ಚೆನ್ನೈ: ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಸದ್ಯ ನೆಲ್ಸನ್ ದಿ... ಓದನ್ನು ಮುಂದುವರಿಸಿ
ಸ್ಟೈಲಿಶ್ ಸ್ಟಾರ್ ಬರ್ತ್ಡೇ ಸಂಭ್ರಮಕ್ಕೆ ಗದ್ದಲ – ಪೊಲೀಸರ ಲಘು ಲಾಠಿ ಪ್ರಹಾರ
ಹೈದರಾಬಾದ್: ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜು... ಓದನ್ನು ಮುಂದುವರಿಸಿ
ಹೊಸ ಜಾಂಬಿ ಡ್ರಗ್ ಅಲರ್ಟ್: ದುನಿಯಾ ವಿಜಯ್ ಎಚ್ಚರಿಕೆ
ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವಿಡಿಯೋಗಳು... ಓದನ್ನು ಮುಂದುವರಿಸಿ
ಡಾನ್ಸ್ ಕರ್ನಾಟಕ ಡಾನ್ಸ್ ಗ್ರಾಂಡ್ ಫಿನಾಲೆ ಈ ವಾರಾಂತ್ಯ
ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಡಾನ್ಸ್... ಓದನ್ನು ಮುಂದುವರಿಸಿ
ಪ್ಯಾನ್ ಇಂಡಿಯಾ ‘ರಾಮಾಯಣ’ ಚಿತ್ರ: ರಾವಣ ಪಾತ್ರದಲ್ಲಿ ಯಶ್ ಕುತೂಹಲ
ಮುಂಬೈ: ಭಾರತೀಯ ಸಿನಿರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿರುವ... ಓದನ್ನು ಮುಂದುವರಿಸಿ
ಪತಿಯ ಸಿನಿಮಾಗಿಗೂ ಹಣ ಕೇಳಿದ್ರಾ ನಯನತಾರಾ? ಎಲ್ಐಕೆ’ ಪ್ರೀ-ರಿಲೀಸ್ನಲ್ಲಿ ಹುಟ್ಟಿದ ವಿವಾದ
ಚೆನ್ನೈ: ಸಿನಿಮಾ ರಂಗದಲ್ಲಿ ಹಣದ ಪ್ರಭಾವದ ಬಗ್ಗೆ ಮತ್ತೆ ಚರ್ಚೆ ಹ... ಓದನ್ನು ಮುಂದುವರಿಸಿ
ಶಾಂತ್ ನೀಲ್–ಜೂನಿಯರ್ ಎನ್ಟಿಆರ್ ಪ್ರಾಜೆಕ್ಟ್ ಬಗ್ಗೆ ವದಂತಿಗೆ ಬ್ರೇಕ್
ಸ್ಯಾಂಡಲ್ವುಡ್ನ ಪ್ಯಾನ್-ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಸ್ಟಾ... ಓದನ್ನು ಮುಂದುವರಿಸಿ
ನ್ಯಾಷನಲ್ ಕ್ರಶ್ ರಶ್ಮಿಕಾ ತವರಿನಲ್ಲಿ ವಿಜಯ್ ಜೋಡಿ – ಕೊಡಗಿನಲ್ಲಿ ಸಂಭ್ರಮ
ಕೊಡಗು: ಸ್ಯಾಂಡಲ್ವುಡ್ನಿಂದ ಸಿನಿ ಪಯಣ ಆರಂಭಿಸಿ ನ್ಯಾಷನಲ್ ಕ್ರ... ಓದನ್ನು ಮುಂದುವರಿಸಿ
‘ಕೆಡಿ’ ಹಾಡು ವಿವಾದ – ನೋರಾ ಫತೇಹಿಗೆ ಮತ್ತೆ ನೋಟಿಸ್
ಬೆಂಗಳೂರು: ನಿರ್ದೇಶಕ ಪ್ರೇಮ್ ಅವರ ‘ಕೆಡಿ’ ಚಿತ್ರದ ‘ಸೆರಗ ಸರ್ಸೆ... ಓದನ್ನು ಮುಂದುವರಿಸಿ