ಕೆ.ಜಿ.ಎಫ್–ಕದಿರಿ ಬೆನ್ನಲ್ಲೇ ಗುಡಿಬಂಡೆಗೂ ಚಿನ್ನದ ಹುಡುಕಾಟ...ಬಂಗಾರಕ್ಕಾಗಿ ಹೆಲಿ ಸರ್ವೆ: ಗುಡಿಬಂಡೆ ಸುತ್ತಮುತ್ತ ಜಮೀನು ಧರ ಏರಿಕೆ ನಿರೀಕ್ಷೆ
ಗುಡಿಬಂಡೆ: ಕೆ.ಜಿ.ಎಫ್ ಮತ್ತು ಅಂಧ್ರಪ್ರದೇಶದ ಕದಿರಿ ಯ ಸುತ್ತ ಮುತ್ತ ಚಿನ್ನಕ್ಕಾಗಿ ಹೆಲಿ ಸರ್ವೆ ಪ್ರಾರಂಭವಾಗುತ್ತಿದ್ದು, ಇತ್ತ ಗುಡಿಬಂಡೆಯ ಸುತ್ತಮುತ್ತಲು ಸಹ ಹಳದಿ ಲೋಹಕ್ಕಾಗಿ ಹೆಲಿಕ್ಯಾಪ್ಟರ್ ಸರ್ವೆ ಕಾರ್ಯ ಪ್ರಾರಂಭವಾಗಿದ್ದು, ಜನರಲ್ಲಿ ಚಿನ್ನದ ಆಸೆಯ ಮಂದಹಾಸ ಮನೆ ಮಾಡಿದೆ. ಕರ್ನಾಟಕದಲ್ಲಿ ಕೋಲಾರದ ಚಿನ್ನದ ಗಣಿ ಮತ್ತು ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನ ಲಭ್ಯವಾಗುತ್ತಿತ್ತು, ಈಗಾಗಲೇ ಸುಮಾರು ವರ್ಷಗಳ ಹಿಂದಯೇ ಕೋಲಾರದ ಚಿನ್ನದ ಗಣಿ ಮುಚ್ಚಲ್ಪಟ್ಟಿದ್ದು, ಚಿನ್ನದ ಧರ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಕೆ.ಜಿ.ಎಫ್ ಗಣಿಯನ್ನು ಪುನಾರಂಭ ಮಾಡಲು ಕೇಂದ್ರ ಸರ್ಕಾರ ಮರು ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲಿಯೇ, ಮತ್ತೊಂದು ಚಿನ್ನದ ನಿಕ್ಷೇಪ ಕೆ.ಜಿ.ಎಫ್ ಗೆ ಹೊಂದಿಕೊಂಡಂತೆ ಇರುವುದು ಸೆರ್ವೆ ಕಾರ್ಯದಲ್ಲಿ ಮಾಹಿತಿ ಲಭ್ಯವಾಗಿದೆ.
ಕೆ.ಜಿ.ಎಫ್ ಗೆ ಹೊಂದಿಕೊಂಡಿರುವ ಪಕ್ಕದ ಆಂಧ್ರಪ್ರದೇಶ ರಾಜ್ಯದ ಗಡಿಭಾಗವಾದ ಕದಿರಿಯಲ್ಲಿ ೧ ಟನ್ ಮಣ್ಣಿನಲ್ಲಿ ೪ ಗ್ರಾಂ ಚಿನ್ನ ಲಭ್ಯವಾಗುವಂತಹ ಮಾಹಿತಿ ಹೆಲಿಕಾಪ್ಟರ್ ಸರ್ವೆಯಲ್ಲಿ ಮಾಹಿತಿ ಲಭ್ಯವಾಗಿರುವುದು ಚಿನ್ನ ಖರೀದಿದಾರರಲ್ಲಿ ಕೊಂಚ ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ಬಂದಿದೆ. ಕದಿರಿ ಪ್ರದೇಶದಲ್ಲಿ ಚಿನ್ನ ದೊರಕುತ್ತದೆ ಎಂಬ ಮಾಹಿತಿಯ ಬೆನ್ನೆಲ್ಲೇ, ಆಂಧ್ರಪ್ರದೇಶದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಗುಡಿಬಂಡೆ ತಾಲ್ಲೂಕಿನಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಹೆಲಿಕಾಪ್ಟರ್ ಸರ್ವೆ ಕಾರ್ಯನಡೆಯುತ್ತಿರುವುದು ಸ್ಥಳಿಯರಲ್ಲಿ ಸಂತಸದ ಜೊತೆಯಲ್ಲೇ ಆತಂಕಕ್ಕೆ ಹೀಡುಮಾಡಿದೆ, ಈ ಭಾಗದಲ್ಲೂ ಚಿನ್ನದ ನಕ್ಷೇಪ ಲಭ್ಯವಾದಲ್ಲಿ ಸರ್ಕಾರ ಎಲ್ಲಿ ಭೂ ಸ್ವಾಧೀನ ನಡೆಸುತ್ತದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.
ಚಿನ್ನ ಖನಿಜದ ಆಳ, ಗಾತ್ರ ಮತ್ತು ವ್ಯಾಪ್ತಿಯನ್ನು ಅಂದಾಜಿಸುವ ಉದ್ದೇಶದಿಂದ ಇಲ್ಲಿ ಸಮೀಕ್ಷೆಗಳು ಆರಂಭವಾಗಿದ್ದಿ. ಖನಿಜ ಸಂಪತ್ತು ಗುರುತಿಸುವ ಉದ್ದೇಶದಿಂದ ವೈಮಾನಿಕ ಸಮೀಕ್ಷೆ ನಡೆಯುತ್ತಿದೆ ಎಂದು ವರದಿ ತಿಳಿದು ಲಭ್ಯವಾಗಿದೆ. ಗುಡಿಬಂಡೆ ಪ್ರದೇಶದಲ್ಲಿ ಕೇವಲು ಗ್ರಾನೈಟ್, ಕಲ್ಲು ನಿಕ್ಷೇಪಗಳು ಲಭ್ಯವಾಗಿ, ಅವುಗಳ ಬೇಡಿಕೆ ಸಹ ಎಲ್ಲೆಡೆಯಲ್ಲೂ ಹೆಚ್ಚಿದ್ದು, ಈ ಭಾಗದಲ್ಲಿ ಚಿನ್ನದ ನಿಕ್ಷೇಪಗಳು ಲಭ್ಯವಾಗುವುದೇ ಎಂಬ ಅನುಮಾನಗಳು ಒಂದೆಡೆಯಾದರೆ, ವೈಮಾನಿಕ ಸಮಕ್ಷೇ ಈ ಭಾಗದಲ್ಲಿ ನಡೆಯುತ್ತಿರುವುದರಿಂದ ಚಿನ್ನದ ನಿಕ್ಷೇಪಗಳು ಈ ಭಾಗದಲ್ಲಿ ಏನಾದರೂ ಕಂಡು ಬಂದಿದೆಯೇ ಎಂಬ ಊಹಾಪೋಹಗಳು ಸಹ ಜನರಲ್ಲಿ ಮನೆ ಮಾಡಿದೆ.
ಗುಡಿಬಂಡೆ ತಾಲೂಕು ಬೆಂಗಳೂರಿಗೆ ಕೂಗಳತೆ ದೂರದಲ್ಲಿದ್ದು, ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಮತ್ತು ತಾಲೂಕಿನಲ್ಲಿನ ಜಮೀನುಗಳ ಬೆಲೆ ಗಗನಕ್ಕೆ ಏರಿದ್ದರೂ ವಾಣಿಜ್ಯ, ಹೊಟೆಲ್, ಪೆಟ್ರೋಲ್ ಬಂಕ್, ಕೃಷಿ ಉದ್ದೇಶಗಳಿಗೆ ಸೇರದಂತೆ ಹಾಗೂ ಹಲವು ಉದ್ದೇಶಗಳಿಗೆ ಜಮೀನಿನ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಲೇ ಬರುತ್ತಿದೆ, ಈಗ ಚಿನ್ನದ ಸಮೀಕ್ಷೆಯಲ್ಲಿ ಎಲ್ಲಿಯಾದರು ಒಂದು ಭಾಗದಲ್ಲಿ ನಿಕ್ಷೇಪದ ಕುರುಹುಗಳು ಕಂಡು ಬಂದಲ್ಲಿ ಹಳದಿ ಲೋಹದ ಬೆಲೆ ಏರಿದಂತೆ ಜಮೀನಿನ ಬೆಲೆ ಏಕಾಏಕಿ ಏರಿಕೆಯಾಗುವ ಸಂಬಂವವಿದೆ ಎಂದು ಸ್ಥಳಿಯರು ಹೇಳುತ್ತಿದ್ದಾರೆ. ಈ ಭಾಗದಲ್ಲಿ ಸರ್ವೆ ಕಾರ್ಯ ೧೫ ರಿಂದ ೨೦ ದಿನಗಳ ನಡೆಯಲಿದ್ದು, ಎಲ್ಲೆಲ್ಲಿ ಚಿನ್ನದ ನಿಕ್ಷೇಪ ಕಂಡು ಬರಲಿದೆ ಎಂದು ಸರ್ವೆ ಕಾರ್ಯ ಮುಕ್ತಾಯದ ನಂತರವೇ ತಿಳಿಯಲಿದ್ದು, ಹೆಲಿಕಾಪ್ಟರ್ ಹಾರಾಟದಿಂದ ಈ ಜನರ ಮಾತಲ್ಲಿ ನಮ್ಮ ತಾಲೂಕಿನ ವ್ಯಾಪ್ತಿಯಲ್ಲೂ ಚಿನ್ನ ಲಭ್ಯವಾಗಲಿದೆಯೇ ಎಂಬ ಕುತೂಹಲ ಮಾತ್ರ ಜನರ ಮನೆ ಮಾತಾಗಿದೆ.
ಪಾಪಿರೆಡ್ಡಿ, ಯರ್ರಲಕ್ಕೇನಹಳ್ಳಿ ನಿವಾಸಿ ಮಾತನಾಡಿ ಶುಕ್ರವಾರದಿಂದ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ನಿಂದ ಸರ್ವೆ ಕಾರ್ಯಪ್ರಾರಂಭ ಮಾಡಿದ್ದು, ಈಗಾಗಲೇ ಕದಿರಿಯಲ್ಲಿ ಚಿನ್ನದ ನಿಕ್ಷೇಪ ಲಭ್ಯವಾಗಿದ್ದು, ಈ ಭಾಗದಲ್ಲೂ ಚಿನ್ನ ಲಭ್ಯವಾಗಲಿದೆಯೇ ಎಂಬ ಕುತೂಹಲ ಕೆರಳಿಸಿದ್ದು, ಹಾಗೊಮ್ಮೆ ನಿಕ್ಷೇಪ ಪತ್ತೆಯಾದರೆ ಹೀಗಿರುವ ಜಮೀನಿನ ದುಪ್ಪಟ್ಟು ಧರ ಮತ್ತಷ್ಟು ಏರಿಕೆಯಾಗಲಿದೆ.
(ವರದಿ ಮೊಹಮ್ಮದ್ ನಾಸೀರ್ ಗುಡಿಬಂಡೆ )
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಆಸ್ತಿ ಮಾಲೀಕರೇ ಎಚ್ಚರ..! ನಕಲಿ ದಾಖಲೆ ಸೃಷ್ಟಿಸಿ 158 ಎಕರೆ ಭೂಮಿ, 9 ನಿವೇಶನ ಮಾರಾಟ - ಖತರ್ನಾಕ್ ಭೂಗಳ್ಳರ ಬಂಧನ
ವಿಜಯಪುರ : ಇತ್ತೀಚೆಗೆ ನಕಲಿ ದಾಖಲೆಗಳ ಮೂಲಕ ಮೂಲ ವಾರಸುದಾರರ ಬದಲ... ಓದನ್ನು ಮುಂದುವರಿಸಿ
ಗುಡಿಬಂಡಾ
ಆದಿನಾರಾಯಣರೆಡ್ಡಿಗೆ ಭರ್ಜರಿ ಜಯ; ಕಾಂಗ್ರೆಸ್ ಮುಖಂಡರಿಂದ ಪಟಾಕಿ, ಸಿಹಿ ಹಂಚಿಕೆ
ಗುಡಿಬಂಡೆ: ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ... ಓದನ್ನು ಮುಂದುವರಿಸಿ
ವಿರಾಜಪೇಟೆ
ಮಣ್ಣು ಗುಡ್ಡೆ ಕುಸಿದು ಟಿಪ್ಪರ್ ಚಾಲಕ ಸ್ಥಳದಲ್ಲೇ ಸಾವು..!!!
ಕೊಡಗು : ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಕದನೂರಿನಲ್ಲಿ ಮಣ್ಣು ಗು... ಓದನ್ನು ಮುಂದುವರಿಸಿ
74.80 ಕೋಟಿ ಮೌಲ್ಯದ ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವು
ಬೆಂಗಳೂರು : ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ. 74.... ಓದನ್ನು ಮುಂದುವರಿಸಿ
ಚಿಕ್ಕೋಡಿ
ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ನಕಲಿ ವೈದ್ಯರಿಂದ ಸಾರ್ವಜನಿಕರಿಗೆ ಅಪಾಯ
ಚಿಕ್ಕೋಡಿ: ದಿನೇ ದಿನೇ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿದ... ಓದನ್ನು ಮುಂದುವರಿಸಿ
ನಂಜನಗೂಡು
ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ಅಟ್ಯಾಕ್...ಮಗು ಸೇರಿ ಮೂವರಿಗೆ ಗಂಭೀರ ಗಾಯ
ನಂಜನಗೂಡು : ಜಮೀನಿಗೆ ಬೈಕ್ ನಲ್ಲಿ ತೆರಳುತ್ತಿದ್ದ ರೈತ ದಂಪತಿಗಳ... ಓದನ್ನು ಮುಂದುವರಿಸಿ
ಕುಣಿಗಲ್
ಹುಡುಗಿ ವಿಚಾರಕ್ಕೆ ಕಿರಿಕ್ - ನಡು ರಸ್ತೆಯಲ್ಲಿ ಲಾಂಗು, ಮಚ್ಚು ಹಿಡಿದು ಹೊಡೆದಾಟ!
ತುಮಕೂರು: ಯುವತಿಯ ವಿಚಾರಕ್ಕೆ ಎರಡು ಗುಂಪುಗಳ ನುಡವೆ ಮಾರಾಮಾರಿ ನ... ಓದನ್ನು ಮುಂದುವರಿಸಿ
ಬಸ್ಗಳಲ್ಲಿ ತಂಬಾಕು ಉತ್ಪನ್ನ ಜಾಹೀರಾತಿಗೆ ನಿರ್ಬಂಧ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ, ಬಿಎಂಟ... ಓದನ್ನು ಮುಂದುವರಿಸಿ
ಕೊಪ್ಪಳದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ : ಕಿಮ್ಸ್ ಆಡಳಿತಾಧಿಕಾರಿ ಬಿ.ಕಲ್ಲೇಶ ಮನೆ ಶೋಧ
ಕೊಪ್ಪಳ : ಕೊಪ್ಪಳ ತಾಲೂಕು ಭಾಗ್ಯನಗರ ಪಟ್ಟಣದಲ್ಲಿನ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ಮನರೇಗಾ ಮರುಜಾರಿಗೆ ಆಗ್ರಹಿಸಿ ಚನಕೆ, ಬಾಂಡ್ಲಿ, ಸುತ್ತಿಗೆ ಹಿಡಿದು ವಿನೂತನ ಪ್ರತಿಭಟನೆ
ಬೆಂಗಳೂರು : ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ರಾಜ್ಯ ಮಹಿಳಾ ಕಾ... ಓದನ್ನು ಮುಂದುವರಿಸಿ