‘ಜನ ನಾಯಗನ್’ ಸೆನ್ಸಾರ್ ವಿವಾದ: ರಾಜಕೀಯ ಷಡ್ಯಂತ್ರ ಆರೋಪ
ತಿರುನಲ್ವೇಲಿ: ತಮಿಳುನಾಡಿನಲ್ಲಿ ಚುನಾವಣೆಯ ಕಾವು ಏರುತ್ತಿರುವ ನಡುವೆಯೇ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಭಾರಿ ಸಮಾವೇಶದಲ್ಲಿ ವಿರೋಧಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ವಿಜಯ್, ತಮ್ಮ ವೈಯಕ್ತಿಕ ಜೀವನದಿಂದ ಹಿಡಿದು ‘ಜನ ನಾಯಗನ್’ ಸಿನಿಮಾದ ಸೆನ್ಸಾರ್ ಸಮಸ್ಯೆಯವರೆಗೂ ಎಲ್ಲದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಆರೋಪಿಸಿದರು.
‘ಜನ ನಾಯಗನ್’ ಚಿತ್ರಕ್ಕೆ ಇನ್ನೂ ಸೆನ್ಸಾರ್ ಪ್ರಮಾಣಪತ್ರ ಸಿಗದಿರುವ ಬಗ್ಗೆ ಪ್ರಶ್ನಿಸಿದ ಅವರು, “ನನ್ನನ್ನು ಜನರಿಂದ ದೂರವಿಡಲು ವಿರೋಧಿಗಳು ಹಲವು ಪ್ರಯತ್ನ ಮಾಡುತ್ತಿದ್ದಾರೆ. ಮೊದಲು ಕೆಲವು ಘಟನೆಗಳನ್ನು ನನ್ನ ಮೇಲೆ ಹೊರೆ ಹಾಕಲು ನೋಡಿದರು. ಈಗ ನನ್ನ ಸಿನಿಮಾದ ಬಿಡುಗಡೆಯನ್ನೇ ತಡೆಯಲು ಯತ್ನಿಸುತ್ತಿದ್ದಾರೆ. ಜನರನ್ನು ಭೇಟಿ ಮಾಡದಂತೆ ಹೊಸ ನಿಯಮಗಳನ್ನು ರೂಪಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಕುರಿತು ಪ್ರತಿಕ್ರಿಯಿಸಿದ ವಿಜಯ್, “ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ನನ್ನ ಆಪ್ತರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಕೂಡ ರಾಜಕೀಯದ ಭಾಗವೇ” ಎಂದು ಹೇಳಿದರು. “ನನ್ನ ಮೇಲೆ ಎಷ್ಟೇ ಆರೋಪ ಮಾಡಿದರೂ ಜನರು ನನ್ನ ಜೊತೆಗಿದ್ದಾರೆ. ಈ ಬೆಂಬಲವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ವಿಜಯ್ ವಿಶ್ವಾಸ ವ್ಯಕ್ತಪಡಿಸಿದರು.ಮೊದಲ ಬಾರಿಗೆ ಚುನಾವಣೆಗೆ ಇಳಿಯುತ್ತಿರುವ ವಿಜಯ್ ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ರೈತರಿಗೆ ಜಮೀನು ದಾಖಲೆ ಅಗತ್ಯ – ಈ ದಾಖಲೆಗಳು ಕಡ್ಡಾಯ!
ಬೆಂಗಳೂರು: ರೈತರಿಗೆ ಜಮೀನು ಜೀವನೋಪಾಯದ ಪ್ರಮುಖ ಆಧಾರವಾಗಿದ್ದು,... ಓದನ್ನು ಮುಂದುವರಿಸಿ
ಯೂರಿಯಾ ಖರೀದಿಗೆ ಫಾರ್ಮರ್ ಐಡಿ ಕಡ್ಡಾಯ – ಮುಂಗಾರು ಹಂಗಾಮಿನಿಂದ ಹೊಸ ನಿಯಮ ಜಾರಿ
ಬೆಂಗಳೂರು: ರಾಜ್ಯದ ರೈತರು ಇನ್ನು ಮುಂದೆ ಯೂರಿಯಾ ರಸಗೊಬ್ಬರ ಖರೀದ... ಓದನ್ನು ಮುಂದುವರಿಸಿ
ಮಂಡ್ಯದಲ್ಲಿ 150 ಕೋಟಿ ನೀರಾವರಿ ಯೋಜನೆ: ರೈತರಿಗೆ ಗುಡ್ ನ್ಯೂಸ್
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ರೈತರ ಬಹುಕಾಲದ ನೀರಾವರಿ... ಓದನ್ನು ಮುಂದುವರಿಸಿ
ಗ್ಯಾಸ್ ಕೊರತೆ ಹೊಡೆತ: ಚಿಕ್ಕಬಳ್ಳಾಪುರದಲ್ಲಿ ಹೋಟೆಲ್ಗಳು ಬಂದ್, ರೈತರಿಗೆ ಸಂಕಷ್ಟ-ತರಕಾರಿ ಬೆಲೆ ಭಾರೀ ಕುಸಿತ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉಂಟಾಗಿರುವ ವಾಣಿಜ್ಯ ಗ್ಯಾಸ್ ಸಿಲಿ... ಓದನ್ನು ಮುಂದುವರಿಸಿ
ರೈತರಿಗೆ ಗುಡ್ ನ್ಯೂಸ್: ಸಾಲ ಮನ್ನಾಕ್ಕೆ ಹೊಸ ರೂಲ್ಸ್ – ಫ್ಯಾಮಿಲಿ ಸೆಲ್ಫಿ ಕಡ್ಡಾಯ!
ಹೈದರಾಬಾದ್: ರೈತರ ಸಾಲ ಮನ್ನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್... ಓದನ್ನು ಮುಂದುವರಿಸಿ
ಟೊಮೆಟೊ ಉತ್ಪಾದನೆಯಲ್ಲಿ ನಂ.1 ದೇಶ ಯಾವುದು ಗೊತ್ತಾ..? ಉತ್ತರ ಕೇಳಿದ್ರೆ ಶಾಕ್!
ನಮ್ಮ ಮನೆಯ ಅಡುಗೆ ಪ್ರಪಂಚದಲ್ಲಿ ಟೊಮ್ಯಾಟೋಗಳ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದ... ಓದನ್ನು ಮುಂದುವರಿಸಿ
ಯುದ್ಧದ ಪರಿಣಾಮ ಬೀದರ್ ರೈತರಿಗೆ ಭಾರೀ ಹೊಡೆತ – ಕಲ್ಲಂಗಡಿ ಬೆಲೆ ₹2ಕ್ಕೆ ಕುಸಿತ
ಬೀದರ್: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಯ... ಓದನ್ನು ಮುಂದುವರಿಸಿ
100ಕ್ಕೂ ಹೆಚ್ಚು ಹಸುಗಳು, ಲಕ್ಷಾಂತರ ಆದಾಯ – ದೀಸಾ ಮಹಿಳೆಯ ಗೆಲುವು
ಗಾಂಧೀನಗರ: ಗುಜರಾತ್ನ ಬನಾಸ್ ಡೈರಿ ಏಷ್ಯಾದಲ್ಲೇ ಅಗ್ರ ಸ್ಥಾನ ಪಡ... ಓದನ್ನು ಮುಂದುವರಿಸಿ
₹1.5 ಕೋಟಿ ತೆರಿಗೆ ಬಾಕಿ: ಹೈದರಾಬಾದ್ ನಲ್ಲಿರುವ ಜಯಲಲಿತಾ ಮನೆ ಸೀಲ್
ಹೈದರಾಬಾದ್: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹೈದರ... ಓದನ್ನು ಮುಂದುವರಿಸಿ
ಬೆಂಬಲ ಬೆಲೆ ಯೋಜನೆ ಕುರಿತು ಕೇಂದ್ರದ ಜೊತೆ ರಾಜ್ಯದ ಚರ್ಚೆ
ಬೆಂಗಳೂರು: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂ... ಓದನ್ನು ಮುಂದುವರಿಸಿ