ಅಕ್ರಮ ಜೋಳ ಸಂಗ್ರಹ – ಎರಡು ಗೋಡೌನ್ಗಳ ಮೇಲೆ ಎಸಿ ದಾಳಿ
ಬಳ್ಳಾರಿ: ಬಳ್ಳಾರಿಯಲ್ಲಿ ಅಕ್ರಮವಾಗಿ ಜೋಳ ಸಂಗ್ರಹಿಸಿದ್ದ ಎರಡು ಗೋಡೌನ್ಗಳ ಮೇಲೆ ಬಳ್ಳಾರಿ ಎಸಿ ರಾಜೇಶ್ ಹೆಚ್.ಡಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಬಳ್ಳಾರಿ ತಾಲೂಕಿನ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ರೂಪನಗುಡಿ ಗ್ರಾಮದಲ್ಲಿ ಈ ದಾಳಿ ನಡೆದಿದೆ.
ದಾಳಿ ವೇಳೆ ರೈತರಿಂದ ಪಹಣಿ ಪಡೆದು ಅಕ್ರಮವಾಗಿ ಜೋಳವನ್ನು ಸಂಗ್ರಹಿಸಿ ಇಡಲಾಗಿದ್ದುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಒಟ್ಟು 2,400 ಜೋಳದ ಮೂಟೆಗಳನ್ನು ಜಪ್ತಿ ಮಾಡಲಾಗಿದೆ. ರೈತರಿಂದ ಪಹಣಿ ಪಡೆದು ಕಡಿಮೆ ಬೆಲೆಗೆ ಜೋಳ ಖರೀದಿಸಿ, ರೈತ ಸೇವಾ ಸಹಕಾರ ಸಂಘದ ಮೂಲಕ ಹೆಚ್ಚಿನ ಬೆಂಬಲ ಬೆಲೆಗೆ ಮಾರಾಟ ಮಾಡುತ್ತಿದ್ದ ಅಕ್ರಮ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣದಲ್ಲಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮೇಲೆ ಗಂಭೀರ ಅನುಮಾನ ಮೂಡಿದ್ದು, ಜೋಳದ ಅಕ್ರಮ ಖರೀದಿ–ಮಾರಾಟದಲ್ಲಿ ಸಂಘದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿರುವ ಸಾಧ್ಯತೆ ಇದೆ. ಈ ಸಂಬಂಧ ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಗುಡಿಬಂಡಾ
ಎಲ್ಲೋಡು ಬೆಟ್ಟದಲ್ಲಿ ಅದ್ದೂರಿ ಲಕ್ಷ್ಮೀ ಆದಿನಾರಾಯಣಸ್ವಾಮಿ ಜಾತ್ರೆ.-ಭಕ್ತಿಭಾವ, ಸಂಪ್ರದಾಯ ಹಾಗೂ ಜನಸಾಗರದೊಂದಿಗೆ ಮಹೋತ್ಸವ ಸಂಭ್ರಮ.
ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಎಲ್ಲ... ಓದನ್ನು ಮುಂದುವರಿಸಿ
ಜುಮ್ಮಾ ಮಸೀದಿ ಬಳಿ ಚಿನ್ನದ ಅಂಗಡಿ ಮಾಲೀಕನ ಸ್ಕೂಟಿ ಬೆಂಕಿಗಾಹುತಿ – ಯಾರಿಗೂ ಗಾಯವಿಲ್ಲ
ಗದಗ : ಗದಗ ನಗರದಲ್ಲಿ ಜುಮ್ಮಾ ಮಸೀದಿ ಬಳಿ ಚಿನ್ನದ ಅಂಗಡಿಯ... ಓದನ್ನು ಮುಂದುವರಿಸಿ
ಗುಂಡ್ಲುಪೇಟೆ
ಕ್ರಷರ್ ಪಾಲುದಾರಿಕೆಯಲ್ಲಿ ಗನ್ ಬೆದರಿಕೆ – ಹೈ ಡ್ರಾಮಾ ಮೆಟ್ಟಿಲು
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಮೀಪದ ಹಿರಿಕಾಟಿ... ಓದನ್ನು ಮುಂದುವರಿಸಿ
ಖಾಸಗಿ ಜೆಟ್ ವಿಮಾನ ಧರೆಗೆ ಉರುಳಿಕೆ – ಇಬ್ಬರಿಗೆ ಗಾಯ
ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಮಂಗಳೂ... ಓದನ್ನು ಮುಂದುವರಿಸಿ
ಮೆಟ್ರೋ ದರ ಪರಿಷ್ಕರಣೆ ವಿಚಾರದಲ್ಲಿ ಬಿಜೆಪಿ ಗೂಬೆ ಕೂರಿಸುತ್ತಿದೆ – ದಿನೇಶ್ ಗುಂಡೂರಾವ್
ಕಲಬುರಗಿ: ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ವಿಚಾರದಲ್ಲಿ ಬಿ... ಓದನ್ನು ಮುಂದುವರಿಸಿ
ಕುಣಿಗಲ್
ಮದುವೆ ಮಂಟಪದಲ್ಲೇ ಹೈಡ್ರಾಮಾ – ತಾಳಿ ಕಟ್ಟುವ ಕ್ಷಣದಲ್ಲಿ ಮೊದಲ ಪತ್ನಿ ಎಂಟ್ರಿ
ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಸ್ಎಲ್ಎನ್ ಕನ... ಓದನ್ನು ಮುಂದುವರಿಸಿ
ಪಾರ್ಟಿ ಬಳಿಕ ಸ್ಪೀರಿಟ್ ಸೇವನೆ – ಇಬ್ಬರು ಯುವಕರ ಸಾವು
ಕೊಪ್ಪಳ: ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಫೆಬ್ರವರಿ 4ರ... ಓದನ್ನು ಮುಂದುವರಿಸಿ
ಯೂರಿಯಾ ಅಕ್ರಮ ಸಂಗ್ರಹ ಜಾಲ ಬಯಲು?
ಬಳ್ಳಾರಿ : ಅಕ್ರಮ ಅದಿರು ಸಂಗ್ರಹ, ಮರಳು–ಗ್ರ್ಯಾವೆಲ್ ಸ್ಟ... ಓದನ್ನು ಮುಂದುವರಿಸಿ
ರಾಜಕೀಯ ಬೆಳವಣಿಗೆಗಳ ಕುರಿತು ಸಚಿವ ಶ್ರೀರಾಮುಲು ತೀಕ್ಷ್ಣ ಹೇಳಿಕೆ
ಬಳ್ಳಾರಿ: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣ... ಓದನ್ನು ಮುಂದುವರಿಸಿ
ರಾಜಕೀಯ ಬೆಳವಣಿಗೆಗಳ ಕುರಿತು ಶ್ರೀರಾಮುಲು ತೀಕ್ಷ್ಣ ಹೇಳಿಕೆ
ಬಳ್ಳಾರಿ: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣ... ಓದನ್ನು ಮುಂದುವರಿಸಿ