100ಕ್ಕೂ ಹೆಚ್ಚು ಹಸುಗಳು, ಲಕ್ಷಾಂತರ ಆದಾಯ – ದೀಸಾ ಮಹಿಳೆಯ ಗೆಲುವು

ಗಾಂಧೀನಗರ: ಗುಜರಾತ್‌ನ ಬನಾಸ್ ಡೈರಿ ಏಷ್ಯಾದಲ್ಲೇ ಅಗ್ರ ಸ್ಥಾನ ಪಡೆದು ಸಾವಿರಾರು ರೈತರ ಬದುಕಿಗೆ ಬೆಳಕು ತಂದಿದೆ. ಇದೇ ಡೈರಿಯೊಂದಿಗೆ ಸಂಬಂಧಿಸಿದ ಸಾಮಾನ್ಯ ಮಹಿಳೆಯೊಬ್ಬರ ಯಶೋಗಾಥೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ದೀಸಾ ತಾಲ್ಲೂಕಿನ ಶೇರ್ಪುರ ಗ್ರಾಮದ ನಿವಾಸಿ ದರಿಯಾಬೆನ್ ತೀಕಮಾಜಿ ರಜಪೂತ್ (53), ಅನಕ್ಷರಸ್ಥೆಯಾಗಿದ್ದರೂ ತಮ್ಮ ಪರಿಶ್ರಮದಿಂದ ಮಾದರಿ ರೈತೆಯಾಗಿದ್ದಾರೆ.

 

ಮೂಲತಃ ಕೃಷಿ ಅವಲಂಬಿಸಿದ್ದ ದರಿಯಾಬೆನ್ ಅವರಿಗೆ ಮಳೆಯಿಂದ ವರ್ಷಂಪ್ರತಿ ಬೆಳೆ ಹಾನಿಯಾಗುತ್ತಿತ್ತು. ಇದರಿಂದ ನಿರಾಶರಾದ ಅವರು 2005-06ರಲ್ಲಿ ಪಶುಸಂಗೋಪನೆಯತ್ತ ಮುಖಮಾಡಿದರು. ಆರಂಭದಲ್ಲಿ ಕೆಲವೇ ದೇಶೀ ಹಸುಗಳನ್ನು ಸಾಕಿ ದಿನಕ್ಕೆ 5-6 ಲೀಟರ್ ಹಾಲು ಉತ್ಪಾದನೆ ಮೂಲಕ ಜೀವನ ಸಾಗಿಸುತ್ತಿದ್ದರು.

 

ಪತಿಯ ನಿಧನದ ಬಳಿಕ ಇಬ್ಬರು ಮಕ್ಕಳ ಹೊಣೆ ಹೊತ್ತರೂ, ಅವರು ಧೈರ್ಯ ಕಳೆದುಕೊಳ್ಳಲಿಲ್ಲ. ಹಂತ ಹಂತವಾಗಿ ಉಳಿತಾಯ ಮಾಡಿ ಹಸುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು, ಇಂದು 100ಕ್ಕೂ ಹೆಚ್ಚು ಹಸುಗಳನ್ನು ಸಾಕುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ 3.30ಕ್ಕೆ ಎದ್ದು ಹಸುಗಳ ಪಾಲನೆ ಮಾಡುವ ದರಿಯಾಬೆನ್, ಸುಮಾರು ₹9 ಲಕ್ಷ ವೆಚ್ಚದಲ್ಲಿ ಆಧುನಿಕ ಶೆಡ್ ನಿರ್ಮಿಸಿದ್ದಾರೆ. ತಿಂಗಳಿಗೆ ₹60,000 ಮೇವಿನ ಖರ್ಚು ಇದ್ದರೂ, ಪ್ರತಿದಿನ 800 ರಿಂದ 900 ಲೀಟರ್ ಹಾಲು ಡೈರಿಗೆ ಪೂರೈಸುತ್ತಿದ್ದಾರೆ.

 

ಇದರ ಮೂಲಕ ತಿಂಗಳಿಗೆ ₹9 ರಿಂದ ₹10 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದು, ಈ ವರ್ಷ ಮಾತ್ರವೇ ಸುಮಾರು ₹48 ಲಕ್ಷ ಗಳಿಸಿ ದೀಸಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾಲು ಪೂರೈಸಿದ ರೈತೆಯಾಗಿ ಮೊದಲ ಸ್ಥಾನ ಪಡೆದಿದ್ದಾರೆ. ದರಿಯಾಬೆನ್ ಅವರ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸಂಕಷ್ಟಗಳನ್ನು ಎದುರಿಸುವ ಧೈರ್ಯ ಇತರ ಮಹಿಳೆಯರಿಗೆ ಸ್ಪೂರ್ತಿಯಾಗಿದೆ. ಪಶುಸಂಗೋಪನೆಯಲ್ಲಿ ಯಶಸ್ಸು ಸಾಧಿಸಲು ಅವರು ಇಂದು ಜೀವಂತ ಉದಾಹರಣೆಯಾಗಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 days ago

   
Image 1
Image 1

ರೈತರಿಗೆ ಗುಡ್ ನ್ಯೂಸ್: ಸಾಲ ಮನ್ನಾಕ್ಕೆ ಹೊಸ ರೂಲ್ಸ್ – ಫ್ಯಾಮಿಲಿ ಸೆಲ್ಫಿ ಕಡ್ಡಾಯ!

ಹೈದರಾಬಾದ್: ರೈತರ ಸಾಲ ಮನ್ನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಟೊಮೆಟೊ ಉತ್ಪಾದನೆಯಲ್ಲಿ ನಂ.1 ದೇಶ ಯಾವುದು ಗೊತ್ತಾ..? ಉತ್ತರ ಕೇಳಿದ್ರೆ ಶಾಕ್!

ನಮ್ಮ ಮನೆಯ ಅಡುಗೆ ಪ್ರಪಂಚದಲ್ಲಿ ಟೊಮ್ಯಾಟೋಗಳ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೀದರ್

ಯುದ್ಧದ ಪರಿಣಾಮ ಬೀದರ್ ರೈತರಿಗೆ ಭಾರೀ ಹೊಡೆತ – ಕಲ್ಲಂಗಡಿ ಬೆಲೆ ₹2ಕ್ಕೆ ಕುಸಿತ

ಬೀದರ್: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಯ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

₹1.5 ಕೋಟಿ ತೆರಿಗೆ ಬಾಕಿ: ಹೈದರಾಬಾದ್ ನಲ್ಲಿರುವ ಜಯಲಲಿತಾ ಮನೆ ಸೀಲ್

ಹೈದರಾಬಾದ್: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹೈದರ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಬೆಂಗಳೂರು ನಗರ

ಬೆಂಬಲ ಬೆಲೆ ಯೋಜನೆ ಕುರಿತು ಕೇಂದ್ರದ ಜೊತೆ ರಾಜ್ಯದ ಚರ್ಚೆ

ಬೆಂಗಳೂರು: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಧಾರವಾಡ

ಹುಬ್ಬಳ್ಳಿ

ಗಲ್ಫ್ ಯುದ್ಧದ ಪರಿಣಾಮ, ರೈತರಿಗೆ ರಸಗೊಬ್ಬರ ಕೊರತೆ ಭೀತಿ

ಹುಬ್ಬಳ್ಳಿ: ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಯುದ್ಧದ ಪ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಕೊಪ್ಪಳ

ತುಂಗಭದ್ರಾ ಜಲಾಶಯದ ಗೇಟ್‌ಗಳ ಬದಲಾವಣೆಗೆ ಸರ್ಕಾರ ತೀವ್ರ ಕ್ರಮ -ರೈತರಿಗೆ ನಿರಾಳತೆ

ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತು... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಅಕ್ರಮ ಪಂಪ್‌ಸೆಟ್ ಸಂಪರ್ಕ ಸಕ್ರಮಕ್ಕೆ 3 ತಿಂಗಳ ಗಡುವು: ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ

ಬೆಂಗಳೂರು: ಅನಧಿಕೃತವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಗದಗ

ಯುಗಾದಿ ಮುನ್ನ ಹೂ ಬೆಳೆಗಾರರಿಗೆ ಮಳೆ ಹೊಡೆತ: ಬೆಲೆ ಪತನ ಗದಗ ರೈತರಿಗೆ ಭಾರೀ ನಷ್ಟ

ಗದಗ: ಯುಗಾದಿ ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದ್ದ ಗದಗ ಜಿಲ್ಲೆಯ ಹೂ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ರೈತರಿಗೆ ಹೊಸ ಆದಾಯದ ಮಾರ್ಗ: ಕಾಡಿನ ರಾಜ ಮಹೋಗಾನಿ: 15 ವರ್ಷದಲ್ಲಿ ₹2 ಕೋಟಿ ಆದಾಯದ ಸಾಧ್ಯತೆ

ಸಾಂಪ್ರದಾಯಿಕ ಕೃಷಿಯೊಂದಿಗೆ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿರುವ ರೈತರಿಗೆ ಮಹೋಗಾನಿ ಬ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1