ತರಗತಿ ಶುರುವಾದ್ರೂ ಪಾಲಿಕೆ ಶಾಲೆಗಳಿಗಿಲ್ಲ ಶಿಕ್ಷಕರ ನೇಮಕ! ಶಿಕ್ಷಣದ ಗುಣಮಟ್ಟ ಕುಸಿಯೋ ಆತಂಕ

ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ತರಗತಿಗಳು ಶುರುವಾದ್ರೂ ಇನ್ನೂ ಶಿಕ್ಷಕರ ನೇಮಕಾತಿ ಅಗಿಲ್ಲ. ಸೆಕ್ಯುರಿಟಿ ಏಜೆನ್ಸಿ ಮೂಲಕ ಶಿಕ್ಷಕರ ನೇಮಕಕ್ಕೆ ವಿರೋಧ ಬಂದ ಬಳಿಕ ಟೆಂಡರ್ ರದ್ದುಮಾಡಿರೋ ಪಾಲಿಕೆ, ಇದೀಗ SDMC ಮೂಲಕ ಶಿಕ್ಷಕರ ನೇಮಕಕ್ಕೆ ಮುಂದಾಗಿದೆ. ಇದೆಲ್ಲದರ ಮಧ್ಯೆ ಮಕ್ಕಳು ಪಾಠ ಕೇಳೋಕೆ ಶಾಲೆಗೆ ಬಂದ್ರೂ ಪಾಠ ಮಾಡೋದಕ್ಕೆ ಶಿಕ್ಷಕರ ಕೊರತೆ ಇರೋದರಿಂದ ಪಾಠ-ಪ್ರವಚನಕ್ಕೆ ಅಡ್ಡಿಯಾಗ್ತಿದೆ ಅನ್ನೋ ಆರೋಪ ಕೇಳಿಬರ್ತಿದೆ. 

 

ರಾಜ್ಯ ಸರ್ಕಾರದ ಯಡವಟ್ಟಿಗೆ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಶಿಕ್ಷಣ ಸಿಗದೆ ಪರದಾಡೋ ಪರಿಸ್ಥಿತಿ ಎದುರಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಬಿಬಿಎಂಪಿ ಶಾಲಾ ಶಿಕ್ಷಕರ ನೇಮಕ್ಕೆ ಸೆಕ್ಯುರಿಟಿ ಏಜೆನ್ಸಿಗೆ ಜವಬ್ದಾರಿ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದಾದ ಬಳಿಕ ಟೆಂಡರ್ ರದ್ದು ಮಾಡಿದ್ರೂ ಸದ್ಯ ಇನ್ನೂ ಶಿಕ್ಷಕರ ನೇಮಕವಾಗಿಲ್ಲ. 

 

ಇತ್ತ ತರಗತಿಗಳು ಶುರುವಾದ್ರೂ ಶಿಕ್ಷಕರ ನೇಮಕವಾಗದೇ ಇರೋದು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮಬೀರ್ತಿದೆ ಅನ್ನೋ ಆರೋಪ ಕೇಳಿಬರ್ತಿದೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.ಈ ಮಕ್ಕಳಿಗೆ ಪಾಠ ಮಾಡೋದಕ್ಕೆ ಅಂತಾ ಪಾಲಿಕೆಯಲ್ಲಿ 150 ಕಾಯಂ ಶಿಕ್ಷಕರು ಮಾತ್ರ ಇದ್ದಾರೆ, ಉಳಿದ 700ಕ್ಕೂ ಹೆಚ್ಚು ಗುತ್ತಿಗೆ ಶಿಕ್ಷಕರು ಗುತ್ತಿಗೆ ಅಧಾರದ ಮೇಲೆ ಸೇವೆ ನೀಡ್ತಿದ್ರು, 

 

ಅದ್ರೆ ಗುತ್ತಿಗೆ ರದ್ದಾಗಿರೋದರಿಂದ ಶಿಕ್ಷಕರ ಕೊರತೆ ಎದುರಾಗಿದೆ. ಇತ್ತ ಏಜೆನ್ಸಿ ರದ್ದು ಮಾಡಿದ ಬಳಿಕ SDMC ಮೂಲಕ ಶಿಕ್ಷಕರನ್ನ ನೇಮಿಸೋಕೆ ಸರ್ಕಾರ ಸಮಿತಿ ರಚನೆ ಮಾಡಿದೆ, ಈ ಸಮಿತಿ ಎಲ್ಲವನ್ನ ಪರಿಶೀಲಿಸಿ ಜೂನ್ 10ರೊಳಗೆ ಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನ ನೇಮಿಸಬೇಕಿದೆ, ಆದ್ರೆ ಈಗಾಗಲೇ ತರಗತಿಗಳು ಶುರುವಾಗಿದ್ದು, ಶಿಕ್ಷಕರ ನೇಮಕ ಆಗೋ ತನಕ ಮಕ್ಕಳು ಪಾಠ-ಪ್ರವಚನವಿಲ್ಲದೇ ಕಾಯೋ ಅನಿವಾರ್ಯತೆ ಎದುರಾಗಿದೆ.

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 months ago

   
Image 1
Image 1
ಬೆಂಗಳೂರು ನಗರ

ಬಿಬಿಎಂಪಿ ಶಾಲೆಗಳ ದಾಖಲಾತಿಯಲ್ಲಿ ಏಕಾಏಕಿ ಶೇ 40 ರಷ್ಟು ಕುಸಿತ!

ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿನ ಬಿಬಿಎಂಪಿ ಶಾಲೆಗಳ ದಾಖಲ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಆಹಾರ ತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿ ಪಡೆದವರಿಗಿದೆ ಉತ್ತಮ ಉದ್ಯೋಗಾವಕಾಶ !

ಆಹಾರ ಪದಾರ್ಥಗಳು, ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳ ಪೌಷ್ಟಿಕಾಂಶದ ಮೌಲ್ಯವನ್ನು... ಓದನ್ನು ಮುಂದುವರಿಸಿ


Edited by: ಪ್ರವೀಣ್

3 months ago

   
Image 1

ಕೋರ್ ಇಂಜಿನಿಯರಿಂಗ್ ಕೋರ್ಸ್ ಉತ್ತೇಜಿಸಲಿದೆ ಈ ವಿದ್ಯಾರ್ಥಿ ವೇತನ

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ್... ಓದನ್ನು ಮುಂದುವರಿಸಿ


Edited by: ಪ್ರವೀಣ್

3 months ago

   
Image 1

ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ !

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಂದು ತನ್ನ ನಾಗರಿಕ ಸೇವೆಗಳ ಪೂರ್ವಭಾವಿ... ಓದನ್ನು ಮುಂದುವರಿಸಿ


Edited by: ಪ್ರವೀಣ್

3 months ago

   
Image 1

ವೈದ್ಯಕೀಯ ವ್ಯಾಸಂಗಕ್ಕಾಗಿ ಫಿಲಿಪೈನ್ಸ್‌ಗೆ ಹೋಗುವ ವಿದ್ಯಾರ್ಥಿಗಳಿಗಿದೆ ವಿಶೇಷ ಸಲಹೆ

ಉನ್ನತ ವ್ಯಾಸಂಗಕ್ಕಾಗಿ ಫಿಲಿಪೈನ್ಸ್‌ಗೆ ಹೋಗಲು ಯೋಜಿಸುತ್ತಿರುವ ವೈದ್ಯಕೀಯ ಆಕಾಂಕ್ಷಿಗ... ಓದನ್ನು ಮುಂದುವರಿಸಿ


Edited by: ಪ್ರವೀಣ್

3 months ago

   
Image 1

ಐಸಿಎಐ ಸಿಎ ಫೌಂಡೇಶನ್ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ !

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ (ICAI) ಜೂನ್ ಸಿಎ ಫೌಂ... ಓದನ್ನು ಮುಂದುವರಿಸಿ


Edited by: ಪ್ರವೀಣ್

3 months ago

   
Image 1

ನೀಟ್ ಯುಜಿ ಪರೀಕ್ಷೆ ಮರು ನಡೆಸುವಂತೆ ಆಗ್ರಹ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ನೀಟ್ ಯುಜಿ 2024 ಪತ್ರಿಕೆ ಸೋರಿಕೆಯ ಸುದ್ದಿಯನ್ನು ಗಮನದಲ್ಲಿಟ್ಟುಕೊಂಡು, ಕೆಲವು ಅಭ್ಯ... ಓದನ್ನು ಮುಂದುವರಿಸಿ


Edited by: ಪ್ರವೀಣ್

3 months ago

   
Image 1

ಮಕ್ಕಳ ಸಾಮರ್ಥ್ಯವನ್ನು ಅಳೆಯಲಿದೆ ಹೋಲಿಸ್ಟಿಕ್ ಪ್ರಗತಿ ಕಾರ್ಡ್

ಸರ್ಕಾರಿ ಶಾಲೆಗಳಲ್ಲಿ 1 ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹೋಲಿಸ್ಟಿಕ್ ಪ್ರ... ಓದನ್ನು ಮುಂದುವರಿಸಿ


Edited by: ಪ್ರವೀಣ್

3 months ago

   
Image 1

ಯುಜಿಸಿ ನೆಟ್ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ !

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ರಾಷ್ಟ್ರೀಯ... ಓದನ್ನು ಮುಂದುವರಿಸಿ


Edited by: ಪ್ರವೀಣ್

3 months ago

   
Image 1
ಬೆಂಗಳೂರು ನಗರ

ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ - ಶಿಕ್ಷಣದ ಗುಣಮಟ್ಟ ಕುಸಿಯೋ ಆತಂಕ!

ಬೆಂಗಳೂರು: ಶಾಲೆ ಆರಂಭದ ನಡುವೆ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1