ಲಂಚಕ್ಕಾಗಿ ಅಲೆದಾಡಿಸಿದ ಪ. ಪಂ ಮಹಿಳಾ ಸಿಬ್ಬಂದಿ - ದಾಖಲೆ ಪತ್ರಕ್ಕಾಗಿ ಕಛೇರಿಗೆ ಬಂದ ವ್ಯಕ್ತಿಯನ್ನು ಸತಾಯಿಸಿದ ಅಧಿಕಾರಿ
ಕಡಬ: ಬ್ಯಾಂಕ್ ಲೋನ್ ಪಡೆದು ಮನೆ ಕಟ್ಟುವ ಸಲುವಾಗಿ ಅಗತ್ಯ ದಾಖಲೆ ಪತ್ರಕ್ಕಾಗಿ ಬಂದ ವ್ಯಕ್ತಿಯ ಬಳಿ ಪಟ್ಟಣ ಪಂಚಾಯತ್ ಸಿಬ್ಬಂದಿ ಲಂಚದ ಆಸೆಗಾಗಿ ಎರಡು ದಿನ ಅಲೆದಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ವಿಡಿಯೋ ವೈರಲ್ ಆಗಿದೆ. ಎರಡು ದಿನದಲ್ಲಿ ಬರೋಬ್ಬರಿ ಒಂಭತ್ತು ಬಾರಿ ವ್ಯಕ್ತಿಯೊಬ್ಬರನ್ನು ಅಲೆದಾಡಿಸಿದ ಪಟ್ಟಣ ಪಂಚಾಯತ್ ಮಹಿಳಾ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜೂ.5 ರಂದು ಸಂಜೆ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ನಡೆದಿದೆ.
ಈ ಕುರಿತ ಮಾತಿನ ಚಕಮಕಿಯ ವೀಡಿಯೋ ವೈರಲ್ ಆಗಿದ್ದು ಬಳಿಕ ಎಚ್ಚೆತ್ತ ಅಧಿಕಾರಿಗಳು ರಾತ್ರಿಯೊಳಗೆ ಅವರಿಗೆ ಸಂಬಂಧಿಸಿದ ದಾಖಲೆ ಪತ್ರ ಮಾಡಿಸಿಕೊಟ್ಟ ಘಟನೆ ನಡೆದಿದೆ.ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗಿರೀಶ್ ಕೋಡಿಬೈಲು ಅವರು ಮನೆ ನಿರ್ಮಾಣಕ್ಕಾಗಿ ಸಾಲ ಪಡೆಯುವ ಸಲುವಾಗಿ ಬ್ಯಾಂಕ್ ಗೆ ಅಗತ್ಯ ದಾಖಲೆ ಪತ್ರ ಸಲ್ಲಿಸಬೇಕಾಗಿತ್ತು. ಪ.ಪಂ ನಿಂದ ನೀಡುವ ನಮೂನೆ 3 ದಾಖಲೆಯೊಂದರಲ್ಲಿ ಸಿಬ್ಬಂದಿಗಳು ಕಣ್ತಪ್ಪಿನಿಂದ ರಸ್ತೆ ದಿಕ್ಕನ್ನು ತಪ್ಪಾಗಿ ನಮೂದಿಸಿದ್ದರು .
ಹೀಗಾಗಿ ಕೂಡಲೇ ಸರಿಪಡಿಸಿಕೊಂಡು ಬರುವಂತೆ ಬ್ಯಾಂಕ್ ನಲ್ಲಿ ಹೇಳಿದ್ದರು.ಈ ಬಗ್ಗೆ ಪಟ್ಟಣ ಪಂಚಾಯತ್ ನಲ್ಲಿ ಜೂ.04 ರಂದು ಮುಂಜಾನೆ ಅವರು ಬಂದು ವಿಚಾರಿಸಿದ ವಿವಿಧ ಸಮಯ ನೀಡಿ ನಾಲ್ಕು ಬಾರಿ ಸತಾಯಿಸಿ ಮರುದಿನ ಬರುವಂತೆ ಮಹಿಳಾ ಸಿಬ್ಬಂದಿ ( ಬಿಲ್ ಕಲೆಕ್ಟರ್) ಹೇಳಿದ್ದರು, ಅಲ್ಲದೆ ತೆರಿಗೆಯನ್ನು ಪಾವತಿಸಲು ತಿಳಿಸಿದಂತೆ ಹಣ ಪಾವತಿಸಿದ್ದರು . ಮರುದಿನವೂ ಕಚೇರಿಗೆ ಹೋಗಿ ವಿಚಾರಿಸಿದಾಗ ಮತ್ತೆ ಬೇರೆ ಬೇರೆ ಸಮಯ ನೀಡಿ ಐದು ಬಾರಿ ಅಲೆದಾಡಿಸಿ ಒಟಿಪಿ ಬಾರದೆ ಆಗುವುದಿಲ್ಲ ಎಂದು ಹೇಳಿ ಜೂ.07 ರಂದು ಬರುವಂತೆ ಮಹಿಳಾ ಸಿಬ್ಬಂದಿ ಸೂಚಿಸಿದ್ದರು.
ದಾಖಲೆಗಾಗಿ ಬಂದ ವ್ಯಕ್ತಿ ಅಳುತ್ತಾ ಹೋದ್ರು: ಬ್ಯಾಂಕ್ ಗೆ ನಿಗದಿತ ಸಮಯದಲ್ಲಿ ದಾಖಲೇ ಪತ್ರ ಸಲ್ಲಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಅಲೆದಾಟ ಮಾಡಿ ನೊಂದ ಗಿರೀಶ್ ಅವರು ದಿಕ್ಕು ತೋಚದೆ ಅಳುತ್ತಾ ಭೀಮ್ ಆರ್ಮಿ ಸಂಘಟನೆಯ ಕಡಬ ತಾಲೂಕು ಅಧ್ಯಕ್ಷ ರಾಘವ ಕಳಾರ ಗಮನಕ್ಕೆ ತಂದಿದ್ದರು. ಜೂ.06 ರಂದು ಸಂಜೆ ಕಚೇರಿಗೆ ಹೋಗಿ ವಿಚಾರಿಸಿದಾಗ ಉಡಾಫೆಯಿಂದ ಮಾತನಾಡಿದನ್ನು ಗಮನಿಸಿ ರಾಘವ ಅವರು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಹಣ ಕೊಟ್ಟರೆ ಒಂದೇ ದಿನದಲ್ಲಿ ದಾಖಲೆ ಪತ್ರ ನೀಡುವ ನೀವು ಬಡವರನ್ನು ಸತಾಯಿಸುತ್ತಿರುವುದಾಗಿ ಏರು ಧ್ವನಿಯಲ್ಲಿ ಮಾತನಾಡಿ ಇಂದೇ ಕೊಡುವಂತೆ ಪಟ್ಟು ಹಿಡಿದರು.
ಈ ವೇಳೆ ಮರು ಜಿಪಿಎಸ್ ಮಾಡಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದು ಇದರಿಂದ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ ಹಣ ಬೇಕಿದ್ದರೆ ಹೇಳಲಿ ಒಳ್ಳೆಯ ಜಾಗದಲ್ಲಿ ತಂದು ಕೊಡುತ್ತೇನೆ ಎಂದು ಹೇಳಿದರು.ಮನೆಗೆ ಹೋದ ಸಿಬ್ಬಂದಿಯನ್ನು ಮುಖ್ಯಾಧಿಕಾರಿಯ ಕಾರು ಕಳುಹಿಸಿ ಕಚೇರಿಗೆ ಕರೆ ತಂದ್ರು- ಪಟ್ಟಣ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಾರಣ ದಿಕ್ಕು ದೋಚದೆ ಇವತ್ತೆ ಮಾಡಿಕೊಡುವ ಭರವಸೆ ನೀಡಿದರು.
ಇದರಿಂದ ಸಾಯಂಕಾಲ ಮನೆಗೆ ಹೋಗಿದ್ದ ಬಿಳಿನೆಲೆಯ ಮತ್ತೋರ್ವ ಮಹಿಳಾ ಸಿಬ್ಬಂದಿಯನ್ನು ಬರ ಹೇಳಿದ್ದರು.ಹೀಗಾಗಿ ತುರ್ತಾಗಿ ಮುಖ್ಯಾಧಿಕಾರಿಯ ಕಾರನ್ನು ಬಿಳಿನೆಲೆಗೆ ಕಳುಹಿಸಿ ಸಂಜೆ ಸುಮಾರು 7:15ರ ಹೊತ್ತಿಗೆ ಕಚೇರಿಗೆ ಸಿಬ್ಬಂದಿ ಆಗಮಿಸಿದರು. ನಂತರ ಸರಿ ಸುಮಾರು 8:00ಯ ಹೊತ್ತಿಗೆ ತಿದ್ದುಪಡಿಗೊಂಡ ನಮೂನೆ 3 ದಾಖಲೆ ಪತ್ರವನ್ನು ಯಾವುದೇ ಒಟಿಪಿ ಇಲ್ಲದೆ, ಜಿಪಿಯಸ್ ಮಾಡದೆ ಸಿದ್ದಪಡಿಸಿ ನೀಡಿದ್ದಾರೆಂದು ತಿಳಿದುಬಂದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಚಿಕ್ಕಬಳ್ಳಾಪುರ: ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರಿದರೆ ಕಾಂಗ್ರೆಸ್ಗೆ ಟಫ್ ಫೈಟ್ ಕಾಯಂ...!
ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಸಲು ನೀಡಿದ ಬ... ಓದನ್ನು ಮುಂದುವರಿಸಿ
ಯಲಹಂಕ
ರಾಜಾನುಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಚನ್ನಮ್ಮ
ಯಲಹಂಕ: ರಾಜಾನುಕುಂಟೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಚನ್... ಓದನ್ನು ಮುಂದುವರಿಸಿ
ಕಿತ್ತೂರು
ಕಿತ್ತೂರು ತಾ.ಪಂ ಕಚೇರಿಗೆ ಜಿ.ಪಂ ಸಿಇಒ ರಾಹುಲ್ ಶಿಂಧೆ ಭೇಟಿ - ಸಾಂಕ್ರಾಮಿಕ ರೋಗ ಬಾರದಂತೆ ಮುಂಜಾಗ್ರತ ಕ್ರಮಕ್ಕೆ ಸೂಚನೆ
ಕಿತ್ತೂರು: ಮಳೆಗಾಲ ಆರಂಭವಾಗಿದ್ದು ಸಾಂಕ್ರಾಮಿಕ ಕಾಯಿಲೆಗಳು ಉಲ್ಬ... ಓದನ್ನು ಮುಂದುವರಿಸಿ
ಕಾರ್ಕಳ
ಇನ್ನಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ 8 ಟವರ್ ನಿರ್ಮಾಣ – ಗ್ರಾಮಸ್ಥರ ಆಕ್ರೋಶ
ಕಾರ್ಕಳ : ಉಡುಪಿ ಜಿಲ್ಲೆಯ ಎಲ್ಲೂರು ಗ್ರಾಮದ ನಂದಿಕೂರಿನಿಂದ ಕೇರಳ... ಓದನ್ನು ಮುಂದುವರಿಸಿ
ನೀರಿಗಾಗಿ ಹಾಹಾಕಾರದ ನಡುವೆ ಫ್ಲೋರೈಡ್ ಯುಕ್ತ ನೀರು ಪೂರೈಕೆ : ಗ್ರಾಮ ಪಂಚಾಯತಿ ವಿರುಧ್ಧ ಗ್ರಾಮಸ್ಥರ ಆಕ್ರೋಶ
ಗದಗ: ನೀರಿಗಾಗಿ ಹಾಹಾಕಾರದ ನಡುವೆ ಫ್ಲೋರೈಡ್ ಯುಕ್ತ ನೀರು ಪೂರೈಕೆ... ಓದನ್ನು ಮುಂದುವರಿಸಿ
ಚಾಮರಾಜನಗರ: ಪಂಚಾಯಿತಿಯಿಂದ ಆಶ್ರಯ ಮನೆ ಕೊಡಿಸುವುದಾಗಿ ಪುಸಲಾಯಿಸಿ ವಿವಾಹಿತೆ ಮೇಲೆ ಅತ್ಯಾಚಾರ!
ಚಾಮರಾಜನಗರ: ಆಶ್ರಯ ಮನೆ ಕೊಡಿಸುವುದಾಗಿ ಪುಸಲಾಯಿಸಿ ವಿವಾಹಿತೆ ಮೇ... ಓದನ್ನು ಮುಂದುವರಿಸಿ
ಹೆಬ್ಬಸೂರು ಗ್ರಾ. ಪಂ ವ್ಯಾಪ್ತಿಯ ಹಿತ್ತಲಗುಡ್ಡ ಗ್ರಾಮದ ಸೋಲಿಗರ ಕಾಲನಿಯ ದುಸ್ಥಿತಿ... ಸೋರುವ ಸೂರಿನಲ್ಲಿ ಸೋಲಿಗರ ಜೀವನ
ಚಾಮರಾಜನಗರ : ಒಂದೆಡೆ ಹೊಸ ಮನೆ ನಿರ್ಮಾಣಗೊಳ್ಳುವವರೆಗೂ ಜೋಪಡಿ, ಶ... ಓದನ್ನು ಮುಂದುವರಿಸಿ
ನೀರಿನ ಟ್ಯಾಂಕ್, ಬೋರ್ವೆಲ್ಗಳ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗೆ ಸಿಇಒ ಸೂಚನೆ
ಮೈಸೂರು: ಕುಡಿಯುವ ನೀರಿನ ಟ್ಯಾಂಕ್, ಬೋರ್ವೆಲ್ಗಳ ಸ್ವಚ್ಛತೆ ಹ... ಓದನ್ನು ಮುಂದುವರಿಸಿ
ಜಗಳೂರು
ತೋರಣಗಟ್ಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೀರಪ್ಪ ಅವಿರೋಧ ಆಯ್ಕೆ
ಜಗಳೂರು : ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿ... ಓದನ್ನು ಮುಂದುವರಿಸಿ
ಜಗಳೂರು
ಗ್ರಾ. ಪಂಚಾಯಿತಿಯಲ್ಲಿ ಅನುದಾನ ದುರ್ಬಳಕೆ .. ? ಪಲ್ಲಾಗಟ್ಟೆ ಗ್ರಾಮದ ದಲಿತ ಕಾಲೋನಿಯಲ್ಲಿ ಮೂಲಭೂತ ಸೌಲಭ್ಯ ಮರೀಚಿಕೆ
ಜಗಳೂರು : ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿ... ಓದನ್ನು ಮುಂದುವರಿಸಿ