ಬಕ್ರೀದ್ ಹಬ್ಬ ಪ್ರಯುಕ್ತ ಬೆಂಗಳೂರಲ್ಲಿ ಭರ್ಜರಿ ಕುರಿ ವ್ಯಾಪಾರ.. ರೈತರು ಖುಷ್!

ಬೆಂಗಳೂರು: ಬಕ್ರೀದ್​​​ ಹಬ್ಬದ ಹಿನ್ನೆಲೆ ಪ್ರತಿ ವರ್ಷವೂ ಭರ್ಜರಿ ಕುರಿ ವ್ಯಾಪಾರ ನಡೆಯಲಿದೆ. ಎಂದಿನಂತೆ ಈ ಬಾರಿಯೂ ಬಗೆ ಬಗೆಯ ತಳಿಗಳ ಕುರಿಗಳು ಬಜಾರಿಗೆ ಬಂದಿದೆ. ನಗರದ ಅತಿ ದೊಡ್ಡ ಕುರಿ ಮಾರುಕಟ್ಟೆಯಾಗಿರುವ ಈದ್ಗಾ ಮೈದಾನದಲ್ಲಿ ಈಗಲೇ ಭರ್ಜರಿ ವ್ಯಾಪಾರ ಶುರುವಾಗಿದೆ. ಜೂನ್​​ 17ಕ್ಕೆ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನಡೆಯಲಿದೆ. ಈ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕುರಿ, ಮೇಕೆ ವ್ಯಾಪಾರ ಜೋರಾಗಿದೆ.

 

ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದಾದ ಬಕ್ರೀದ್​​ ಸಮೀಪಿಸಿದೆ. ಜೂನ್​​ 17ಕ್ಕೆ ಸಾರ್ವತ್ರಿಕವಾಗಿ ನಾಡಿನೆಲ್ಲೆಡೆ ಬಕ್ರೀದ್​ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಬೆಂಗಳೂರಿಗೆ ಭಾರೀ ಪ್ರಮಾಣದಲ್ಲಿ ಕುರಿ, ಮೇಕೆಗಳು ಬಂದಿಳಿದಿದೆ. ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ನಗರದ ಕುರಿ ಮಾರುಕಟ್ಟೆಗೆ ಇಷ್ಟೊಂದು ಮೇಕೆ ಕುರಿಗಳನ್ನು ಮಾರಾಟಕ್ಕೆ ಇರಿಸಲಾಗಿದ್ದು, ಭರ್ಜರಿ ಆದಾಯ ಬರುವ ನಿರೀಕ್ಷೆಯಲ್ಲಿದ್ದಾರೆ ರೈತರು. ಆದರೆ ಗ್ರಾಹಕರು ಈ ಬಾರಿ ಕುರಿಗಳ ರೇಟ್​ ಹೆಚ್ಚಳವಾಗಿದೆ ಎನ್ನುತ್ತಿದ್ದಾರೆ. 

 

ನಗರದ ಚಾಮರಾಜಪೇಟೆ, ಟ್ಯಾನರಿ ರೋಡ್, ಆರ್ ಟಿ‌ನಗರ ಸೇರಿದಂತೆ ನಗರದ ಕೆಲವು ಭಾಗದಲ್ಲಿ ಭರ್ಜರಿಯಾಗಿ ಕುರಿ ವ್ಯಾಪಾರ ನಡೆಯುತ್ತಿದೆ. ಎಂದಿನಂತೆ ಈ ಬಾರಿಯೂ ನಾಟಿ ಕುರಿ, ಬನ್ನೂರು, ಮೋಟಾ ಬನ್ನೂರು, ಕಿರಗಲ್ ಕುರಿ ಹಾಗೂ ಟಗರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. 15 ಸಾವಿರದಿಂದ 1 ಲಕ್ಷದ ವರೆಗೆ ವಿವಿಧ ತಳಿಯ ಕುರಿಗಳು ಬಜಾರ್​ ನಲ್ಲಿ ಮಾರಾಟವಾಗುತ್ತಿದೆ. 

 

ಈ ಬಾರಿ ಬೆಂಗಳೂರಿಗೆ ಪಕ್ಕದ ರಾಮನಗರ, ತುಮಕೂರು, ಶಿರಾ, ಚಿತ್ರದುರ್ಗ, ಕೋಲಾರ, ಮೈಸೂರು ಭಾಗಗಳಿಂದ ಅತಿ ಹೆಚ್ಚು ಕುರಿಗಳನ್ನು ರೈತರು ಮಾರಾಟಕ್ಕಿಟ್ಟಿದ್ದಾರೆ. ಕೊರೋನಾ ಬಳಿಕ ಕುಗ್ಗಿರುವ ಹೈನುಗಾರಿಕೆ ಚಟುವಟಿಕೆ ಈ ಬಾರಿಯ ಬಕ್ರೀದ್​​ ನಲ್ಲಿ ಚೇತರಿಕೆ ಕಾಣುವ ವಿಶ್ವಾಸದಲ್ಲಿದ್ದಾರೆ ರೈತರು. 

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 months ago

   
Image 1
Image 1
ಬೆಂಗಳೂರು ನಗರ

ಟೊಮೆಟೊ ಬೆಲೆ ಗಗನಕ್ಕೆ, ತರಕಾರಿ ಬೆಲೆಯೂ ಏರಿಕೆ..! ದರ ಜಿಗಿತಕ್ಕೆ ಗ್ರಾಹಕರ ಜೇಬಿಗೆ ಕತ್ತರಿ

ಬೆಂಗಳೂರು : ಕಳೆದ ವಾರವಷ್ಟೆ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1
ಬೆಂಗಳೂರು ನಗರ

ಬಜೆಟ್ ಘೋಷಣೆ ಜೂ.20 ರೊಳಗೆ ಅನುಷ್ಠಾನ ತನ್ನಿ: ಎನ್. ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿರುವ ಜನಕ ಹೊಸ ಕೃ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1
ಧಾರವಾಡ

ಹುಬ್ಬಳ್ಳಿ

ಅಡಿಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ ಕೇಂದ್ರ ನೀಡುವ ಅನುದಾನದಲ್ಲಿ ಕರ್ನಾಟಕಕ್ಕೆ ಅನ್ಯಾಯ

ಹುಬ್ಬಳ್ಳಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಅಡಿಯಲ್ಲಿ ಕೃಷಿ ಉ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಕರಿಮೆಣಸಿನ ಕೃಷಿಗೆ ಹೆಚ್ಚಿದ ಬೇಡಿಕೆ, ಇಲ್ಲಿದೆ ಇದರ ಕೃಷಿ ವಿಧಾನಗಳು

ಕರಿಮೆಣಸನ್ನು ಮಸಾಲೆಗಳ ರಾಜ ಎಂದೂ ಕರೆಯುತ್ತಾರೆ. ಹೆಚ್ಚಿನ ಅಡುಗೆಮನೆಗಳಲ್ಲಿ ನೀವು ಈ... ಓದನ್ನು ಮುಂದುವರಿಸಿ


Edited by: ಪ್ರವೀಣ್

4 months ago

   
Image 1

ತೆಂಗಿನ ಕೃಷಿಯ ಸಮಯದಲ್ಲಿ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ

ತೆಂಗಿನ ಕೃಷಿಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಉತ್ತಮ ಆದಾಯ ಗಳಿಸಬಹುದು. ಸರಿಯಾದ ಕ... ಓದನ್ನು ಮುಂದುವರಿಸಿ


Edited by: ಪ್ರವೀಣ್

4 months ago

   
Image 1

ಒಂದು ವರ್ಷದಲ್ಲಿ ಆಲೂಗಡ್ಡೆ, ಈರುಳ್ಳಿ, ಟೊಮೆಟೊ ಬೆಲೆ ಎಷ್ಟು ಹೆಚ್ಚಾಗಿದೆ?

ಕಳೆದ ವರ್ಷ ಬೆಲೆ ಏರಿಕೆ ಹೆಚ್ಚಾಗಿದೆ. ಹಲವು ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಹಣದುಬ್... ಓದನ್ನು ಮುಂದುವರಿಸಿ


Edited by: ಪ್ರವೀಣ್

4 months ago

   
Image 1

ಪ್ರಧಾನಿಯಾಗಿ ಮೊದಲ ದಿನವೇ ಬಿಗ್‌ ಅನೌನ್ಸ್ ಮಾಡಿದ ಮೋದಿ... ರೈತರೇ ನಿಮ್ಮ ಬ್ಯಾಂಕ್‌ ಅಕೌಂಟ್‌ ನೋಡಿ!

ನವದೆಹಲಿ: ಪ್ರಧಾನಿಯಾದ ಮೊದಲ ದಿನವೇ ಮೋದಿ ರೈತರಿಗೆ ಬಂಪರ್ ಗಿಫ್ಟ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ಶುಂಠಿ ಕೃಷಿಯ ವಿಧಾನಗಳೇನು? ಇಲ್ಲಿದೆ ಮಾಹಿತಿ

ಜೂನ್ ಮತ್ತು ಜುಲೈ ತಿಂಗಳಲ್ಲಿ ಸಾಂಬಾರ ಬೆಳೆಗಳನ್ನು ಬೆಳೆಯಲು ರೈತರು ತಮ್ಮ ಹೊಲಗಳನ್ನು... ಓದನ್ನು ಮುಂದುವರಿಸಿ


Edited by: ಪ್ರವೀಣ್

4 months ago

   
Image 1

ದೊಡ್ಡ ಮೆಣಸಿನಕಾಯಿ ಬೆಳೆಯಿಂದ ಲಕ್ಷ ಲಕ್ಷ ಗಳಿಸಿ!

ಬೆಂಗಳೂರು: ಕ್ಯಾಪ್ಸಿಕಂಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಸಾಕಷ... ಓದನ್ನು ಮುಂದುವರಿಸಿ


Edited by: ಬಾನು

4 months ago

   
Image 1

ರಸಗೊಬ್ಬರದ ವ್ಯಾಪಾರ ಮಾಡುವ ಮೂಲಕ ರೈತರು ಅತ್ಯಧಿಕ ಲಾಭ ಗಳಿಸಬಹುದು

ಭಾರತ ಕೃಷಿ ಪ್ರಧಾನ ದೇಶ. ಇಂದಿಗೂ, ಭಾರತದ ಜನಸಂಖ್ಯೆಯ 50% ಕ್ಕಿಂತ ಹೆಚ್ಚು ಜನರು ಕೃಷ... ಓದನ್ನು ಮುಂದುವರಿಸಿ


Edited by: ಪ್ರವೀಣ್

4 months ago

   
Image 1