ಬಕ್ರೀದ್ ಹಬ್ಬ ಪ್ರಯುಕ್ತ ಬೆಂಗಳೂರಲ್ಲಿ ಭರ್ಜರಿ ಕುರಿ ವ್ಯಾಪಾರ.. ರೈತರು ಖುಷ್!
ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆ ಪ್ರತಿ ವರ್ಷವೂ ಭರ್ಜರಿ ಕುರಿ ವ್ಯಾಪಾರ ನಡೆಯಲಿದೆ. ಎಂದಿನಂತೆ ಈ ಬಾರಿಯೂ ಬಗೆ ಬಗೆಯ ತಳಿಗಳ ಕುರಿಗಳು ಬಜಾರಿಗೆ ಬಂದಿದೆ. ನಗರದ ಅತಿ ದೊಡ್ಡ ಕುರಿ ಮಾರುಕಟ್ಟೆಯಾಗಿರುವ ಈದ್ಗಾ ಮೈದಾನದಲ್ಲಿ ಈಗಲೇ ಭರ್ಜರಿ ವ್ಯಾಪಾರ ಶುರುವಾಗಿದೆ. ಜೂನ್ 17ಕ್ಕೆ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನಡೆಯಲಿದೆ. ಈ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕುರಿ, ಮೇಕೆ ವ್ಯಾಪಾರ ಜೋರಾಗಿದೆ.
ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದಾದ ಬಕ್ರೀದ್ ಸಮೀಪಿಸಿದೆ. ಜೂನ್ 17ಕ್ಕೆ ಸಾರ್ವತ್ರಿಕವಾಗಿ ನಾಡಿನೆಲ್ಲೆಡೆ ಬಕ್ರೀದ್ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಬೆಂಗಳೂರಿಗೆ ಭಾರೀ ಪ್ರಮಾಣದಲ್ಲಿ ಕುರಿ, ಮೇಕೆಗಳು ಬಂದಿಳಿದಿದೆ. ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ನಗರದ ಕುರಿ ಮಾರುಕಟ್ಟೆಗೆ ಇಷ್ಟೊಂದು ಮೇಕೆ ಕುರಿಗಳನ್ನು ಮಾರಾಟಕ್ಕೆ ಇರಿಸಲಾಗಿದ್ದು, ಭರ್ಜರಿ ಆದಾಯ ಬರುವ ನಿರೀಕ್ಷೆಯಲ್ಲಿದ್ದಾರೆ ರೈತರು. ಆದರೆ ಗ್ರಾಹಕರು ಈ ಬಾರಿ ಕುರಿಗಳ ರೇಟ್ ಹೆಚ್ಚಳವಾಗಿದೆ ಎನ್ನುತ್ತಿದ್ದಾರೆ.
ನಗರದ ಚಾಮರಾಜಪೇಟೆ, ಟ್ಯಾನರಿ ರೋಡ್, ಆರ್ ಟಿನಗರ ಸೇರಿದಂತೆ ನಗರದ ಕೆಲವು ಭಾಗದಲ್ಲಿ ಭರ್ಜರಿಯಾಗಿ ಕುರಿ ವ್ಯಾಪಾರ ನಡೆಯುತ್ತಿದೆ. ಎಂದಿನಂತೆ ಈ ಬಾರಿಯೂ ನಾಟಿ ಕುರಿ, ಬನ್ನೂರು, ಮೋಟಾ ಬನ್ನೂರು, ಕಿರಗಲ್ ಕುರಿ ಹಾಗೂ ಟಗರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. 15 ಸಾವಿರದಿಂದ 1 ಲಕ್ಷದ ವರೆಗೆ ವಿವಿಧ ತಳಿಯ ಕುರಿಗಳು ಬಜಾರ್ ನಲ್ಲಿ ಮಾರಾಟವಾಗುತ್ತಿದೆ.
ಈ ಬಾರಿ ಬೆಂಗಳೂರಿಗೆ ಪಕ್ಕದ ರಾಮನಗರ, ತುಮಕೂರು, ಶಿರಾ, ಚಿತ್ರದುರ್ಗ, ಕೋಲಾರ, ಮೈಸೂರು ಭಾಗಗಳಿಂದ ಅತಿ ಹೆಚ್ಚು ಕುರಿಗಳನ್ನು ರೈತರು ಮಾರಾಟಕ್ಕಿಟ್ಟಿದ್ದಾರೆ. ಕೊರೋನಾ ಬಳಿಕ ಕುಗ್ಗಿರುವ ಹೈನುಗಾರಿಕೆ ಚಟುವಟಿಕೆ ಈ ಬಾರಿಯ ಬಕ್ರೀದ್ ನಲ್ಲಿ ಚೇತರಿಕೆ ಕಾಣುವ ವಿಶ್ವಾಸದಲ್ಲಿದ್ದಾರೆ ರೈತರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಟೊಮೆಟೊ ಬೆಲೆ ಗಗನಕ್ಕೆ, ತರಕಾರಿ ಬೆಲೆಯೂ ಏರಿಕೆ..! ದರ ಜಿಗಿತಕ್ಕೆ ಗ್ರಾಹಕರ ಜೇಬಿಗೆ ಕತ್ತರಿ
ಬೆಂಗಳೂರು : ಕಳೆದ ವಾರವಷ್ಟೆ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ... ಓದನ್ನು ಮುಂದುವರಿಸಿ
ಬಜೆಟ್ ಘೋಷಣೆ ಜೂ.20 ರೊಳಗೆ ಅನುಷ್ಠಾನ ತನ್ನಿ: ಎನ್. ಚಲುವರಾಯಸ್ವಾಮಿ ಸೂಚನೆ
ಬೆಂಗಳೂರು: ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿರುವ ಜನಕ ಹೊಸ ಕೃ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಅಡಿಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ ಕೇಂದ್ರ ನೀಡುವ ಅನುದಾನದಲ್ಲಿ ಕರ್ನಾಟಕಕ್ಕೆ ಅನ್ಯಾಯ
ಹುಬ್ಬಳ್ಳಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಅಡಿಯಲ್ಲಿ ಕೃಷಿ ಉ... ಓದನ್ನು ಮುಂದುವರಿಸಿ
ಕರಿಮೆಣಸಿನ ಕೃಷಿಗೆ ಹೆಚ್ಚಿದ ಬೇಡಿಕೆ, ಇಲ್ಲಿದೆ ಇದರ ಕೃಷಿ ವಿಧಾನಗಳು
ಕರಿಮೆಣಸನ್ನು ಮಸಾಲೆಗಳ ರಾಜ ಎಂದೂ ಕರೆಯುತ್ತಾರೆ. ಹೆಚ್ಚಿನ ಅಡುಗೆಮನೆಗಳಲ್ಲಿ ನೀವು ಈ... ಓದನ್ನು ಮುಂದುವರಿಸಿ
ತೆಂಗಿನ ಕೃಷಿಯ ಸಮಯದಲ್ಲಿ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
ತೆಂಗಿನ ಕೃಷಿಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಉತ್ತಮ ಆದಾಯ ಗಳಿಸಬಹುದು. ಸರಿಯಾದ ಕ... ಓದನ್ನು ಮುಂದುವರಿಸಿ
ಒಂದು ವರ್ಷದಲ್ಲಿ ಆಲೂಗಡ್ಡೆ, ಈರುಳ್ಳಿ, ಟೊಮೆಟೊ ಬೆಲೆ ಎಷ್ಟು ಹೆಚ್ಚಾಗಿದೆ?
ಕಳೆದ ವರ್ಷ ಬೆಲೆ ಏರಿಕೆ ಹೆಚ್ಚಾಗಿದೆ. ಹಲವು ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಹಣದುಬ್... ಓದನ್ನು ಮುಂದುವರಿಸಿ
ಪ್ರಧಾನಿಯಾಗಿ ಮೊದಲ ದಿನವೇ ಬಿಗ್ ಅನೌನ್ಸ್ ಮಾಡಿದ ಮೋದಿ... ರೈತರೇ ನಿಮ್ಮ ಬ್ಯಾಂಕ್ ಅಕೌಂಟ್ ನೋಡಿ!
ನವದೆಹಲಿ: ಪ್ರಧಾನಿಯಾದ ಮೊದಲ ದಿನವೇ ಮೋದಿ ರೈತರಿಗೆ ಬಂಪರ್ ಗಿಫ್ಟ... ಓದನ್ನು ಮುಂದುವರಿಸಿ
ಶುಂಠಿ ಕೃಷಿಯ ವಿಧಾನಗಳೇನು? ಇಲ್ಲಿದೆ ಮಾಹಿತಿ
ಜೂನ್ ಮತ್ತು ಜುಲೈ ತಿಂಗಳಲ್ಲಿ ಸಾಂಬಾರ ಬೆಳೆಗಳನ್ನು ಬೆಳೆಯಲು ರೈತರು ತಮ್ಮ ಹೊಲಗಳನ್ನು... ಓದನ್ನು ಮುಂದುವರಿಸಿ
ದೊಡ್ಡ ಮೆಣಸಿನಕಾಯಿ ಬೆಳೆಯಿಂದ ಲಕ್ಷ ಲಕ್ಷ ಗಳಿಸಿ!
ಬೆಂಗಳೂರು: ಕ್ಯಾಪ್ಸಿಕಂಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಸಾಕಷ... ಓದನ್ನು ಮುಂದುವರಿಸಿ
ರಸಗೊಬ್ಬರದ ವ್ಯಾಪಾರ ಮಾಡುವ ಮೂಲಕ ರೈತರು ಅತ್ಯಧಿಕ ಲಾಭ ಗಳಿಸಬಹುದು
ಭಾರತ ಕೃಷಿ ಪ್ರಧಾನ ದೇಶ. ಇಂದಿಗೂ, ಭಾರತದ ಜನಸಂಖ್ಯೆಯ 50% ಕ್ಕಿಂತ ಹೆಚ್ಚು ಜನರು ಕೃಷ... ಓದನ್ನು ಮುಂದುವರಿಸಿ