700 ಫ್ಲಾಟ್ಗಳಲ್ಲಿ 1.73 ಕೋಟಿ ರೂ. ವಂಚನೆ ಆರೋಪ 18 ಮಂದಿ ವಿರುದ್ಧ FIR
ಬೆಂಗಳೂರು: ಉತ್ತರ ತಾಲ್ಲೂಕಿನ ಶೆಟ್ಟಿಹಳ್ಳಿಯ ಪ್ರತಿಷ್ಠಿತ ಪ್ರಿನ್ಸ್ ಟೌನ್ ಅಪಾರ್ಟ್ಮೆಂಟ್ನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಕೇಳಿಬಂದಿದ್ದು, ಪ್ರಕರಣವು ನಿವಾಸಿಗಳಲ್ಲಿ ಸಂಚಲನ ಮೂಡಿಸಿದೆ.
ಸುಮಾರು 700 ಫ್ಲಾಟ್ಗಳನ್ನು ಹೊಂದಿರುವ ಅಪಾರ್ಟ್ಮೆಂಟ್ನಲ್ಲಿ ಅಸೋಸಿಯೇಷನ್ ಸದಸ್ಯರು ವರ್ಷಕ್ಕೆ ಪ್ರತಿ ಫ್ಲಾಟ್ನಿಂದ ಸುಮಾರು 60 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದರು. ಈ ಮೂಲಕ ವರ್ಷಕ್ಕೆ ಸುಮಾರು 3.6 ಕೋಟಿ ರೂಪಾಯಿ ಸಂಗ್ರಹವಾಗುತ್ತಿತ್ತು. ಆದರೆ, ಈ ಹಣವನ್ನು ಸರಿಯಾದ ರೀತಿಯಲ್ಲಿ ಬಳಸದೇ ಲೆಕ್ಕಪತ್ರಗಳಲ್ಲಿ ಅಕ್ರಮವಾಗಿ ದಾಖಲಿಸಲಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಈ ಸಂಬಂಧ ಅಪಾರ್ಟ್ಮೆಂಟ್ ನಿವಾಸಿ ಮತ್ತು ವಕೀಲೆ ನಿಶಾ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಆಧಾರದ ಮೇಲೆ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಲಕರ್ಣಿ, ಕಾರ್ಯದರ್ಶಿ ಅಲೆಕ್ಸ್, ಖಜಾಂಚಿ ಪ್ರವೀಣ್ ನಾಯ್ಕರ್ ಸೇರಿದಂತೆ ಒಟ್ಟು 18 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೂರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 1.73 ಕೋಟಿ ರೂಪಾಯಿ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೆಲವು ವೆಚ್ಚಗಳನ್ನು ಅನುಮಾನಾಸ್ಪದ ರೀತಿಯಲ್ಲಿ ತೋರಿಸಿರುವುದೂ ಬೆಳಕಿಗೆ ಬಂದಿದೆ. ಉದಾಹರಣೆಗೆ, ವಾಟರ್ಮ್ಯಾನ್ಗೆ 2 ಲಕ್ಷ ರೂಪಾಯಿ ನೀಡಲಾಗಿದೆ ಎಂದು ದಾಖಲಾಗಿದೆ. ಆಡಿಟ್ ವೆಚ್ಚವನ್ನು ಒಂದೇ ವರ್ಷದಲ್ಲಿ 35 ಲಕ್ಷ, ಮತ್ತೊಂದು ವರ್ಷದಲ್ಲಿ 24 ಲಕ್ಷ ರೂಪಾಯಿ ತೋರಿಸಿರುವುದು ಪ್ರಶ್ನೆಗೆ ಕಾರಣವಾಗಿದೆ.
ಇದರೊಂದಿಗೆ, ಅಸೋಸಿಯೇಷನ್ ಹಣವನ್ನು ಆರೋಪಿಗಳು ತಮ್ಮ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವುದಾಗಿ ಗಂಭೀರ ಆರೋಪ ಕೇಳಿಬಂದಿದೆ. ಹೆಂಡತಿ ಹಾಗೂ ಮನೆ ಕೆಲಸದವರ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾಗಲಗುಂಟೆ ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದು, ತನಿಖೆ ಮುಂದುವರೆಯುತ್ತಿದೆ. ಒಟ್ಟಾರೆ, ಪ್ರತಿಷ್ಠಿತ ಅಪಾರ್ಟ್ಮೆಂಟ್ನಲ್ಲಿ ಈ ಪ್ರಮಾಣದ ಹಣಕಾಸು ಅಕ್ರಮದ ಆರೋಪಗಳು ನಿವಾಸಿಗಳಲ್ಲಿ ಆತಂಕ ಹಾಗೂ ಅಸಮಾಧಾನ ಉಂಟುಮಾಡಿವೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಕಾರವಾರ
ಬಡವರ ಹತ್ತಿರ ಸುಲಿಗೆ ಮಾಡಿದ್ರೆ ಹುಷಾರ್: ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಶಾಸಕ ಆರ್ವಿ ದೇಶಪಾಂಡೆ
ಕಾರವಾರ: ಉತ್ತರ ಕನ್ನಡ ಜಿಲ್ಲೆ, ದಾಂಡೇಲಿ ತಾಲ್ಲೂಕಿನಲ್ಲಿ ನಡೆದ... ಓದನ್ನು ಮುಂದುವರಿಸಿ
ಎಲ್ಪಿಜಿ ಕೊರತೆಗೆ ಮೋದಿ–ಟ್ರಂಪ್ ಸ್ನೇಹ ಜವಾಬ್ದಾರಿ: ಎನ್.ಎಸ್. ಬೋಸರಾಜು ಟೀಕೆ
ಕೊಪ್ಪಳ: ಎಲ್ಪಿಜಿ ಸಿಲಿಂಡರ್ ಕೊರತೆಯ ಪರಿಣಾಮಕ್ಕಾಗಿ ಕೇಂದ್ರ ಸರ... ಓದನ್ನು ಮುಂದುವರಿಸಿ
ಶಾಮನೂರು ಕುಟುಂಬ ರಾಜಕೀಯ ಪರಂಪರೆ ಮುಂದುವರಿದು: ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಶಾಮನೂರು... ಓದನ್ನು ಮುಂದುವರಿಸಿ
ಸಚಿವ ಖರ್ಗೆ ಮನಸ್ಸು ತೋರದ ಕಾರಣ ಏರ್ಪೋರ್ಟ್ ಸ್ಥಗಿತ - ವಿಜಯೇಂದ್ರ ಟೀಕೆ
ಕಲಬುರಗಿ: ಕಲಬುರಗಿ ಏರ್ಪೋರ್ಟ್ ತಕ್ಷಣ ಕಾರ್ಯಾರಂಭಗೊಳ್ಳಬಹುದಾಗಿ... ಓದನ್ನು ಮುಂದುವರಿಸಿ
ಕೋತಿ ಕಿತಾಪತಿ–ಹೆಜ್ಜೇನು ದಾಳಿ: ತುಮಕೂರಿನಲ್ಲಿ : 65 ವರ್ಷದ ವ್ಯಕ್ತಿ ಸಾವು
ತುಮಕೂರು: ತುಮಕೂರಿನ ಮಾರುತಿ ನಗರದಲ್ಲಿ ಕೋತಿಯ ಕಿತಾಪತಿಯಿಂದ ಉಂಟ... ಓದನ್ನು ಮುಂದುವರಿಸಿ
ಕೆಂಪೇಗೌಡ ಏರ್ಪೋರ್ಟ್ ಸತತ ಸಾಧನೆ : ವಿಶ್ವ ಮಟ್ಟದಲ್ಲಿ ಬೆಂಗಳೂರು ಏರ್ಪೋರ್ಟ್ ಟಾಪ್!
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌ... ಓದನ್ನು ಮುಂದುವರಿಸಿ
ವಾರ್ಡ್ ಮೀಸಲಾತಿ ಗೊಂದಲ: ಟಿ.ಎ. ಶರವಣ ಸಕ್ರೀಯ ಆಕ್ಷೇಪ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ... ಓದನ್ನು ಮುಂದುವರಿಸಿ
ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿದರೆ ಕ್ಷಮೆ ಇಲ್ಲ: ಡಿಕೆಶಿ ಎಚ್ಚರಿಕೆ
ಬೆಂಗಳೂರು: ನಗರದಲ್ಲಿ ರಸ್ತೆ ಬದಿಯಲ್ಲಿ ಹಳೆಯ ವಾಹನಗಳನ್ನು ನಿರ್ಲ... ಓದನ್ನು ಮುಂದುವರಿಸಿ
ಸಿಲಿಂಡರ್ ಕೊರತೆ ಹೆಚ್ಚಳ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರ
ಬೆಂಗಳೂರು: ದೇಶದಾದ್ಯಂತ ಎಲ್ಪಿಜಿ ಸಿಲಿಂಡರ್ ಕೊರತೆ ಮುಂದುವರಿದ... ಓದನ್ನು ಮುಂದುವರಿಸಿ
ಬೆಂಗಳೂರು ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರ ನಿಷೇಧ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳನ್ನು ಸುಧಾರಿಸಲು ಹೊಸ ನೀತಿ ರ... ಓದನ್ನು ಮುಂದುವರಿಸಿ